Wednesday, May 31, 2023

12 ಕೋಟಿ ಲಾಟರಿ ಗೆದ್ದ ದೇಗುಲದ ಕ್ಲರ್ಕ್!

Follow Us

newsics.com 
ತಿರುವನಂತಪುರಂ: ದೇವಸ್ಥಾನದಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಇಡುಕ್ಕಿ ಮೂಲದ ವ್ಯಕ್ತಿ 12 ಕೋಟಿ ಲಾಟರಿ ಗೆದ್ದಿದ್ದಾನೆ.
ಎರ್ನಾಕುಲಂನ ಕಡವಂತ್ರಾದ ಪೊನ್ನೆತ್ ದೇಗುಲದಲ್ಲಿ ಕ್ಲರ್ಕ್ ಆಗಿರುವ ಅನಂತು ವಿಜಯನ್ (24) ಲಾಟರಿ ಗೆದ್ದ ಅದೃಷ್ಟಶಾಲಿ. ತೆರಿಗೆ ಎಲ್ಲಾ ಕಡಿತವಾಗಿ 7.56 ಕೋಟಿ ರೂ. ವಿಜಯನ್ ಕೈಸೇರಲಿದೆ.
ಲಾಟರಿ ಬಹುಮಾನ ಘೋಷಣೆಗೂ ಕೆಲವೇ ಗಂಟೆ ಮುನ್ನ ಸ್ನೇಹಿತರ ಜತೆ ತಮಾಷೆ ಮಾಡಿದ್ದ ಅನಂತು ವಿಜಯನ್, ಈ ಬಾರಿ ಪ್ರಥಮ ಬಹುಮಾನ ಗೆಲ್ಲುವುದಾಗಿ ಹೇಳಿದ್ದ. ಸೋರುತ್ತಿರುವ ಮನೆ, ಕಿತ್ತು ಹೋದ ಮಾಳಿಗೆ, ಇನ್ನೇನು ಬಿದ್ದು ಹೋಗುವ ಹಂತದಲ್ಲಿರುವ ಸೂರು ಅನಂತು ಮತ್ತು ಆತನ ಕುಟುಂಬವನ್ನು ಕಂಗಾಲಾಗಿಸಿತ್ತು. ಕೇರಳದ ಇಡುಕ್ಕಿಯಲ್ಲಿ ಬಡತನದಲ್ಲೇ ನರಳುತ್ತಿದ್ದ ಅನಂತು ಕುಟುಂಬಕ್ಕೆ ಮನೆ ರಿಪೇರಿ ಮಾಡಿಸಲೂ ಹಣವಿರಲಿಲ್ಲ. ಆದರೆ ‘ತಿರುಓಣಂ ಬಂಪರ್’ ಲಾಟರಿ ಅನಂತು ವಿಜಯನ್ ಅವರ ಬದುಕನ್ನೇ ಬದಲಿಸಿದೆ.

10 ಬಾರಿ ಎವರೆಸ್ಟ್ ಏರಿದ್ದ ‘ಹಿಮದ ಚಿರತೆ’ ಇನ್ನಿಲ್ಲ

ಅ.3ರಂದು ವಿಶ್ವದ ಅತಿ ಉದ್ದದ ‘ಅಟಲ್ ಸುರಂಗ ಮಾರ್ಗ’ ಲೋಕಾರ್ಪಣೆ

ಮತ್ತಷ್ಟು ಸುದ್ದಿಗಳು

vertical

Latest News

Weekend With Ramesh; ಸಾಧಕರ ಕುರ್ಚಿಯಲ್ಲಿ ಡಿಕೆ ಶಿವಕುಮಾರ್!

newsics.com ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ. ಭಾನುವಾರದ ಎಪಿಸೋಡ್...

ತರಬೇತಿ ವಿಮಾನ ತುರ್ತು ಭೂಸ್ಪರ್ಶ; ತಪ್ಪಿದ ಭಾರೀ ಅನಾಹುತ

newsics.com ಬೆಳಗಾವಿ: ತರಬೇತಿ ವಿಮಾನವೊಂದು ತಾಂತ್ರಿಕ ತೊಂದರೆಯಿಂದ  ತುರ್ತು ಭೂಸ್ಪರ್ಶ ಆಗಿದೆ. ಈ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದಲ್ಲಿ ನಡೆದಿದೆ. ರೆಡ್‌ಬರ್ಡ್  ಸಂಸ್ಥೆಗೆ ಸೇರಿದ VT- RBF ತರಬೇತಿ ವಿಮಾನ ಇದಾಗಿದ್ದು, ಘಟನೆ ನಡೆದ...

ಆಪರೇಷನ್ ಪಠ್ಯ ಪುಸ್ತಕ; ಪಠ್ಯಗಳ ಪರಿಷ್ಕರಿಸ್ತೇವೆಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ

newsics.com ಬೆಂಗಳೂರು:  ಪಠ್ಯ ಪುಸ್ತಕ  ಪರಿಷ್ಕರಣೆ ನಾವು ಮಾಡ್ತೀವಿ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಪರಿಷ್ಕರಣೆ ಮಾಡ್ತೀವಿ. ಮಕ್ಕಳ ಮನಸ್ಸಿನಲ್ಲಿ ಕಲ್ಮಶ ತುಂಬುವ ಪಠ್ಯ ಕೈ ಬಿಡ್ತೀವಿ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಚರ್ಚಿಸಿ...
- Advertisement -
error: Content is protected !!