ನವದೆಹಲಿ: ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಭಾನುಮತಿ ಅಸ್ವಸ್ಥರಾಗಿ ಕೋರ್ಟ್ ಹಾಲ್ ನಲ್ಲೇ ಕುಸಿದುಬಿದ್ದ ಘಟನೆ ಶುಕ್ರವಾರ ನಡೆದಿದೆ.
ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿ ಭಾನುಮತಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕುಸಿದುಬಿದ್ದರು. ಕೂಡಲೇ ಅವರನ್ನು ವ್ಹೀಲ್ ಚೇರ್ ನಲ್ಲಿ ಚೇಂಬರ್ ಗೆ ಕರೆದೊಯ್ಯಲಾಯಿತು. ಸುಪ್ರೀಂಕೋರ್ಟ್ ನ ವೈದ್ಯರ ತಂಡ ಕೂಡಲೇ ಅವರಿಗೆ ಸೂಕ್ತ ಚಿಕಿತ್ಸೆ ನೀಡಿತು. ಸ್ವಲ್ಪ ಸಮಯದಲ್ಲೇ ಚೇತರಿಸಿಕೊಂಡ ಜಸ್ಟೀಸ್ ಭಾನುಮತಿ ತಮ್ಮ ಚೇಂಬರ್ ನಲ್ಲೇ ದೋಷಿ ವಿನಯ್ ಶರ್ಮಾ ಅರ್ಜಿಯನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿದರು.
ನಿರ್ಭಯಾ ಕೇಸ್ ವಿಚಾರಣೆ ವೇಳೆ ಕುಸಿದ ನ್ಯಾ.ಭಾನುಮತಿ
Follow Us