newsics.com
ಪನ್ನಾ(ಮಧ್ಯಪ್ರದೇಶ): ಪನ್ನಾ ಜಿಲ್ಲೆಯ ಗಣಿ ಪ್ರದೇಶದಲ್ಲಿ 7.44 ಹಾಗೂ 14.98 ಕ್ಯಾರಟ್ ತೂಕದ ಎರಡು ವಜ್ರದ ಹರಳು ಪತ್ತೆಯಾಗಿದ್ದು, ಇದನ್ನು ಪತ್ತೆಹಚ್ಚಿದ ಇಬ್ಬರು ಕಾರ್ಮಿಕರು ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಕೋಟ್ಯಧಿಪತಿಗಳಾಗಿದ್ದಾರೆ.
ಜರೂರ್ಪುರದ ಗಣಿಯಿಂದ ದಿಲೀಪ್ ಮಿಸ್ತ್ರಿ 7.44 ಕ್ಯಾರೆಟ್ ವಜ್ರ ಹೊರತೆಗೆದ್ರೆ, ಲಖನ್ ಯಾದವ್ ಕೃಷ್ಣ ಕಲ್ಯಾಣ್ಪುರ ಪ್ರದೇಶದಲ್ಲಿ 14.98 ಕ್ಯಾರಟ್ ವಜ್ರ ತೆಗೆದಿದ್ದಾರೆ ಎಂದು ವಜ್ರ ನಿರೀಕ್ಷಕ ಅನುಪಮ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ವಜ್ರಗಳನ್ನು ವಜ್ರ ಕಚೇರಿಯಲ್ಲಿ ಹರಾಜಿಗೆ ಇಡಲಾಗಿದ್ದು, ಹರಾಜಿನಲ್ಲಿ ಬಂದ ಆದಾಯದಲ್ಲಿ 12.5 ಶೇಕಡಾ ಹಣ ಕಾರ್ಮಿಕರ ಪಾಲಾಗಲಿದೆ. 7.44 ಕ್ಯಾರೆಟ್ ವಜ್ರ 30 ಲಕ್ಷ ರೂಪಾಯಿ ಬೆಲೆ ಬಾಳಿದರೆ, ಇನ್ನೊಂದು ವಜ್ರಕ್ಕೆ ಅದರ ದುಪ್ಪಟ್ಟು ಹಣ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬುಂದೇಲ್’ಕಂಡ್’ನ ಹಿಂದುಳಿದ ಪ್ರದೇಶಗಳಲ್ಲೊಂದಾದ ಪನ್ನಾ ವಜ್ರ ಗಣಿಗಾರಿಕೆಗೆ ಹೆಸರಾಗಿದೆ.
ಅಮಿತಾಬ್ ಬಚ್ಚನ್ ವಿರುದ್ಧ ಎಫ್ ಐ ಆರ್ ದಾಖಲು
ತೆಂಗಿನಕಾಯಿ ನೀಡಿ ಬೋಧನಾ ಶುಲ್ಕ ಪಾವತಿಸಿ
ಬೈಕ್’ಗಳ ಡಿಕ್ಕಿ; ನಾಲ್ವರ ಸಾವು, ಇಬ್ಬರ ಸ್ಥಿತಿ ಗಂಭೀರ
ಬೆಂಗಳೂರು ಮಣಿಪಾಲ್ ಆಸ್ಪತ್ರೆ ತೆಕ್ಕೆಗೆ ಕೊಲಂಬಿಯಾ ಏಷ್ಯಾ
2021ರ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ ರದ್ದು