Monday, October 2, 2023

ಬಟ್ಟೆ ಬದಲಿಸುವ ವಿಡಿಯೋ ಬಳಸಿ ಬ್ಲ್ಯಾಕ್’ಮೇಲ್: ವಿವಾಹಿತೆ ಮೇಲೆ ವೃದ್ಧರಿಂದ ಸಾಮೂಹಿಕ ಅತ್ಯಾಚಾರ

Follow Us

newsics.com

ಭೋಪಾಲ್(ಮಧ್ಯಪ್ರದೇಶ): ಬಟ್ಟೆ ಬದಲಿಸುವಾಗ ರಹಸ್ಯವಾಗಿ ತೆಗೆದ ವಿಡಿಯೋವನ್ನೇ ಅಸ್ತ್ರವನ್ನಾಗಿಸಿಕೊಂಡು ವಿವಾಹಿತೆಯ ಮೇಲೆ ಇಬ್ಬರು ವೃದ್ಧರು ಆಗಾಗ ಅತ್ಯಾಚಾರವೆಸಗಿದ್ದಾರೆ.

ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ರತಿಬಾದ್ ಪ್ರದೇಶದ ಫಾರ್ಮ್ ಹೌಸ್ ನಲ್ಲಿ ಈ ಘಟನೆ ನಡೆದಿದೆ.

ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇಬ್ಬರು ಆರೋಪಿಗಳಾದ ಶಿವ ನಾರಾಯಣ್ ಪಾಂಡೆ (60) ಮತ್ತು ಆತನ ಸ್ನೇಹಿತ ದೇವೇಂದ್ರ ಪಾಂಡೆ (81) ಅವರನ್ನು ಸೋಮವಾರ ಬಂಧಿಸಿದ್ದಾರೆ.

ಆರೋಪಿ ಶಿವ ನಾರಾಯಣ್ ಭದ್ರತಾ ಏಜೆನ್ಸಿಯ ಮಾಲೀಕರಾಗಿದ್ದು, ಅವರ ಸ್ನೇಹಿತ ದೇವೇಂದ್ರ ರೇವಾ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ. ಇಬ್ಬರೂ ಸ್ನೇಹಿತರು ಭದ್ರತಾ ಸಿಬ್ಬಂದಿಯ ಪತ್ನಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಶಿವ ನಾರಾಯಣ್ ಅವರು ಮನೆಯ ಸಹಾಯಕರಾಗಿ ಕೆಲಸ ಮಾಡಲು ಭದ್ರತಾ ಸಿಬ್ಬಂದಿಯ ಪತ್ನಿಯನ್ನು ನೇಮಿಸಿಕೊಂಡಿದ್ದರು. ಸುಮಾರು ಒಂದು ವರ್ಷದ ಹಿಂದೆ ಆಕೆ ಬಟ್ಟೆ ಬದಲಾಯಿಸುವಾಗ ರಹಸ್ಯವಾಗಿ ಚಿತ್ರೀಕರಿಸಿಕೊಂಡಿದ್ದಾರೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ವಿಡಿಯೋ ಕ್ಲಿಪ್ ಬಳಸಿಕೊಂಡ ಆರೋಪಿಗಳು ಆಕೆಯ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದಾರೆ.

ಮಹಿಳೆ ತನ್ನ ಗಂಡನಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು.

ಮಹಿಳೆಯರ ಜತೆ ಅನುಚಿತ ವರ್ತನೆ: ನ್ಯೂಯಾರ್ಕ್ ಗವರ್ನರ್ ಪದತ್ಯಾಗ

ಕೋಚ್ ಪತ್ನಿಗೆ ತರಬೇತಿ ನೀಡಿದ್ದ ಕುಸ್ತಿ ಪಟು ವಿನೇಶ್ ಪೊಗಟ್

ಪಂದ್ಯದಲ್ಲಿ ಸೋತಾಗ ಕೋಚ್ ನಮ್ಮ ಜತೆ ಊಟ ಮಾಡಿರಲಿಲ್ಲ: ಸವಿತಾ ಪುನಿಯಾ

ಸೇನಾ ಮುಖ್ಯಸ್ಥರನ್ನು ಭೇಟಿ ಮಾಡಿದ ಚಿನ್ನದ ಹುಡುಗ ನೀರಜ್ ಚೋಪ್ರಾ

ಕೊರೋನಾ ಮೂರನೆ ಅಲೆ ಆರಂಭದ ಭೀತಿ, ಮಕ್ಕಳಲ್ಲಿ ಪ್ರತಿದಿನ 60 ಸೋಂಕು ಪತ್ತೆ

ಹಣ ಬೇಡ, ಪಾತ್ರ ಕೊಡಿ ಎಂದು ಮನವಿ ಮಾಡಿದ ಆಲಿಯಾ ಭಟ್

ಎಟಿಎಂ ನಲ್ಲಿ ಹಣ ಇಲ್ಲದಿದ್ದರೆ ಬ್ಯಾಂಕ್ ಗಳಿಗೆ ದಂಡ: ಆರ್ ಬಿ ಐ ಎಚ್ಚರಿಕೆ

ಆಗಸ್ಟ್ 16ರಿಂದ ಪದವಿಪೂರ್ವ ಕಾಲೇಜು ಆರಂಭ

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನ, ಬೆಳ್ಳಿ ದರ ಸ್ಥಿರ

Newsics.com ಬೆಂಗಳೂರು: ಕಳೆದ ವಾರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದ ಚಿನ್ನ ಬೆಳ್ಳಿಯ ದರ ಈ ವಾರ ಸ್ಥಿರಗೊಂಡಿದೆ. ದೇಶದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 53,350...

ವಿಮಾನದ ತುರ್ತು ಬಾಗಿಲು ತೆರೆಯಲೆತ್ನಿಸಿದ ಪ್ರಯಾಣಿಕ: ತುರ್ತು ಭೂ ಸ್ಪರ್ಶ, ಬಂಧನ

newsics.com ದೇವನಹಳ್ಳಿ: ಟೇಕ್ಆಫ್ ಆಗುತ್ತಿದ್ದ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸ್ವಪ್ನೋಲ್ ಹೋಲೆ ಬಂಧಿತ ಪ್ರಯಾಣಿಕ. ಸ್ವಪ್ನೋಲ್ ಇಂಡಿಗೋ...

ಸಾಮೂಹಿಕ ಪ್ರಾರ್ಥನೆ ವೇಳೆ ಚರ್ಚ್ ಛಾವಣಿ ಕುಸಿತ: 9 ಮಂದಿ ಸಾವು, 50 ಜನರಿಗೆ ಗಾಯ

newsics.com ಸಿಯುಡಾಡ್ ಮಡೆರೊ(ಮೆಕ್ಸಿಕೋ ಸಿಟಿ): ಭಾನುವಾರದ ಸಾಮೂಹಿಕ ಪ್ರಾರ್ಥನೆಯ ಸಮಯದಲ್ಲಿ ಚರ್ಚ್‌ನ ಛಾವಣಿ ಕುಸಿದು 9 ಜನರು ಸಾವನ್ನಪ್ಪಿದ್ದು, ಸುಮಾರು 50 ಜನರು ಗಾಯಗೊಂಡಿದ್ದಾರೆ. ಸುಮಾರು 30 ಮಂದಿ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದಾರೆ. ಉತ್ತರ ಮೆಕ್ಸಿಕೋದಲ್ಲಿ...
- Advertisement -
error: Content is protected !!