newsics.com
ಮುಂಬೈ: ಭಾರೀ ಮಳೆ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ವರ್ಚುವಲ್ ಸೇರಿದಂತೆ ಎಲ್ಲಾ ವಿಚಾರಣೆಗಳನ್ನು ಬುಧವಾರ ರದ್ದು ಮಾಡಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಪ್ರಮುಖ ಆರೋಪಿಗಳಾದ ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೌವಿಕ್ ಚಕ್ರವರ್ತಿ ಅವರ ಜಾಮೀನು ಅರ್ಜಿಯ ವಿಚಾರಣೆ ಬುಧವಾರ ನಿಗದಿಯಾಗಿತ್ತು. ಕಂಗನಾ ರನೌತ್ ಕಚೇರಿ ನೆಲಸಮ ಪ್ರಕರಣದ ವಿಚಾರಣೆಯೂ ಬುಧವಾರ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ವಿಚಾರಣೆಗಳನ್ನು ಮುಂದೂಡಲಾಗಿದ್ದು, ಪ್ರಕರಣ ಸಂಬಂಧಿತ ಪೀಠಗಳು ಗುರುವಾರ (ಸೆ.24) ವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್ ಸೂಚನೆ ನೀಡಿದೆ.
ರಾಜ್ಯಸಭೆಯಲ್ಲೂ ವಿದೇಶಿ ದೇಣಿಗೆ ಮಸೂದೆ ಅಂಗೀಕಾರ
ಸೆ.25ಕ್ಕಿಲ್ಲ, ಸೆ.28 ರಂದು ಕರ್ನಾಟಕ ಬಂದ್- ರೈತ ಸಂಘ