Monday, October 2, 2023

ಖಾಲಿ ಹಾಲಿನ ಪ್ಯಾಕೆಟ್‌, ಪ್ಲಾಸ್ಟಿಕ್‌ ಬಾಟಲ್‌ ಕೊಟ್ರೆ ಪೆಟ್ರೋಲ್‌, ಡೀಸೆಲ್‌ಗೆ ಭಾರೀ ಡಿಸ್ಕೌಂಟ್‌!

Follow Us

newsics.com

ರಾಜಸ್ಥಾನ: ಇಲ್ಲಿಯ ಪೆಟ್ರೋಲ್‌ ಬಂಕ್‌ವೊಂದು ಖಾಲಿ ಹಾಲಿನ ಪ್ಯಾಕೆಟ್‌, ಪ್ಲಾಸ್ಟಿಕ್‌ ಬಾಟಲ್‌ ಕೊಟ್ರೆ ರಿಯಾಯಿತಿಯಲ್ಲಿ ಪೆಟ್ರೋಲ್‌, ಡೀಸೆಲ್‌ ನೀಡುವ ಅಭಿಯಾನವನ್ನು ಆರಂಭಿಸಿದೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಜಾಸ್ತಿ ಆಗಿದೆಯೆಂದು ಹಲವರು ಚಿಂತೆ ಮಾಡುತ್ತಿರುತ್ತಾರೆ. ಆದರೆ ಇಲ್ಲಿ ಪೆಟ್ರೋಲ್‌, ಡೀಸೆಲ್‌ಗೆ ಡಿಸ್ಕೌಂಟ್‌ ಕೊಡುವ ಸಾಹಸಕ್ಕೆ ಕೈ ಹಾಕಿದೆ. ಆದರೆ ಕಂಡೀಷನ್ಸ್‌ ಅಪ್ಲೈ.

ಭಿಲ್ವಾರಾದಲ್ಲಿರುವ ಈ ಪೆಟ್ರೋಲ್‌ ಬಂಕ್‌ಗೆ ಹೋದರೆ ನೀವು ಒಂದು ಲೀಟರ್‌ ಪೆಟ್ರೋಲ್‌ಗೆ ರೂ. 1 ಡಿಸ್ಕೌಂಟ್‌ ಹಾಗೂ ಡೀಸೆಲ್‌ಗೆ 50 ಪೈಸೆ ಡಿಸ್ಕೌಂಟ್‌ ಪಡೆಯಲು ನೀವು ಖಾಲಿ ಹಾಲಿನ ಪ್ಯಾಕೆಟ್‌ಗಳನ್ನು ಹಾಗೂ ಪ್ಲಾಸ್ಟಿಕ್‌ ನೀರಿನ ಬಾಟಲ್‌ಗಳನ್ನು ಅವರಿಗೆ ಕೊಡಬೇಕು. ಕೇಂದ್ರ ಸರ್ಕಾರ ಏಕ ಬಳಕೆ ಪ್ಲಾಸ್ಟಿಕ್‌ ಬ್ಯಾನ್‌ ಮಾಡಿದ ಬಳಿಕ ಇದರಿಂದ ಉತ್ತೇಜಿತರಾದ ಛಗನ್‌ಲಾಲ್‌ ಭಗ್ತಾವರ್ಮಾಲ್‌ ಪೆಟ್ರೋಲ್‌ ಪಂಪ್‌ನ ಮಾಲೀಕ ಅಶೋಕ್‌ ಕುಮಾರ್‌ ಮುಂದ್ರಾ ಜನರನ್ನು ಉತ್ತೇಜಿಸಲು ಈ ಕ್ರಮ ಕೈಗೊಂಡಿದ್ದಾರೆ.

ಜುಲೈ 15ರಂದು ಈ ಸಂಬಂಧದ 3 ತಿಂಗಳ ಕಾಲ ಜಾಗೃತಿ ಅಭಿಯಾನ ಆರಂಭಿಸಿರುವ ಅಶೋಕ್‌ ಕುಮಾರ್‌ ಮುಂದ್ರಾ ಅವರಿಗೆ ರಾಜಸ್ಥಾನದ ಸರಸ್‌ ಡೈರಿ, ಭಿಲ್ವಾರಾ ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಬಲ ಸೂಚಿಸಿದೆ.

ಮಗಳನ್ನು ಕೊಂದು ತಾನೂ ನೇಣಿಗೆ ಶರಣಾದ ದಂತ ವೈದ್ಯೆ

ಸ್ಯಾಂಡಲ್‌ವುಡ್ ನವ ನಾಯಕಿ ವಿರುದ್ಧ ಭುಗಿಲೆದ್ದ ವಿವಾದ, ಮಾಲಾಶ್ರೀ ಹೇಳಿಕೆಗೆ ಆಕ್ರೋಶ

ಪಬ್ ನಲ್ಲಿ ಗಲಾಟೆ ಆರೋಪ: ಸುನಾಮಿ ಕಿಟ್ಟಿ ವಿರುದ್ಧ ದೂರು

ಮತ್ತಷ್ಟು ಸುದ್ದಿಗಳು

vertical

Latest News

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ...

Asian Games; ಭಾರತಕ್ಕೆ ಒಂದೇ ದಿನ 15 ಪದಕ

newsics.com ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 8ನೇ ದಿನವಾದ ಭಾನುವಾರ ಒಂದೇ ದಿನ 15 ಪದಕ ಬಾಚಿಕೊಂಡಿದೆ. 7ನೇ ದಿನವಾದ ಶನಿವಾರ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನೊಂದಿಗೆ 38 ಪದಕಗಳನ್ನು ಭಾರತ...

ಬೆಂಗಳೂರು ಕಂಬಳ: ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು!

newsics.com ಬೆಂಗಳೂರು: ನವೆಂಬರ್ ತಿಂಗಳ 25 ಮತ್ತು 26ನೇ ತಾರೀಕಿನಂದು ಮೊದಲ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿದೆ. ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ನೇತೃತ್ವದಲ್ಲಿ ಕಂಬಳ...
- Advertisement -
error: Content is protected !!