ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಹಿರಿಯ ನಾಯಕ ಜೆ ಪಿ ನಡ್ಡಾ ಆಯ್ಕೆ ಬಹುತೇಕ ಖಚಿತವಾಗಿದೆ.ನಾಳೆ ನಾಮಪತ್ರ ,ಸಲ್ಲಿಸಲಿರುವ ನಡ್ಡಾ ಜನವರಿ 22 ರಂದು ಪಕ್ಷದ ನೇತೃತ್ವ ವಹಿಸಲಿದ್ದಾರೆ. ಬಹುತೇಕ ಅವಿರೋಧ ಆಯ್ಕೆ ನಡೆಯಲಿದೆ. 1960 ಡಿಸೆಂಬರ್ 2 ರಂದು ಜನನ. ಎಬಿವಿಪಿ ಮೂಲಕ ರಾಜಕೀಯ ಅಂಗಳ ಪ್ರವೇಶ. 1978ರಲ್ಲಿ ಎಬಿವಿಪಿ ನಾಯಕನಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದ ಹೆಗ್ಗಳಿಕೆ. ರಾಜಕೀಯ ಶಾಸ್ತ್ರದಲ್ಲಿ ಎಂ. ಎ ಪದವಿ. ಜೊತೆಗೆ ಎಲ್ ಎಲ್ ಬಿ . ಇದು ಶೈಕ್ಷಣಿಕ ಅರ್ಹತೆ. ಪತ್ನಿ ಮಲ್ಲಿಕಾ ನಡ್ಡಾ ಕೂಡ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಹಿಮಾಚಲ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದಾರೆ. ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ತೆರೆಯ ಹಿಂದೆ ನಿಂತು ನಡ್ಡಾ ವಹಿಸಿದ್ದ ಪಾತ್ರ ಅಮೋಘ. ಇದು ಅವರಲ್ಲಿದ್ದ ಸಂಘಟನಾ ಕೌಶಲ್ಯಕ್ಕೆ ಹಿಡಿದ ಕೈ ಗನ್ನಡಿಯಾಗಿತ್ತು. ನಿತೀನ್ ಗಡ್ಕರಿ ಮತ್ತು ಅಮಿತ್ ಶಾ ಜೊತೆ ಪಕ್ಷದ ಸಂಘಟನಾ ಕಾರ್ಯ ಚಟುವಟಿಕೆಯ ಅನುಭವಹೊಂದಿದ್ದಾರೆ. ಜೆ . ಪಿ. ನಡ್ಡಾ ಅವರ ಮುಂದೆ ದೆಹಲಿ ವಿಧಾನಸಭಾ ಚುನಾವಣೆಯ ಗಂಭೀರ ಸವಾಲಿದೆ. ಇಲ್ಲಿ ಆಮ್ ಆದ್ಮಿ ಪಕ್ಷದ ಹವಾ ಜೋರಾಗಿದೆ. ಸತತ ಸೋಲಿನ ಸರಪಳಿಯನ್ನು ತುಂಡರಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಕಮಲ ಪಡೆ ಸಿಲುಕಿದೆ. ಇಲ್ಲಿ ನಡ್ಡಾ ಯಶಸ್ವಿಯಾದರೆ, ಅವರ ರಾಜಕೀಯ ಅಭಿಯಾನ ಸರಿಯಾದ ಹಾದಿಯಲ್ಲಿ ಅಡೆ ತಡೆ ಇಲ್ಲದೆ ಸಾಗಲಿದೆ. ಇಲ್ಲದಿದ್ದರೆ ಅಪಸ್ವರದ ಕೂಗು ಕೇಳಿಸಲಿದೆ.
ಮತ್ತಷ್ಟು ಸುದ್ದಿಗಳು
400 ಅಡಿ ಆಳಕ್ಕೆ ಉರುಳಿದ ವಾಹನ; 6 ಮಂದಿ ಸಾವು, 18 ಜನರಿಗೆ ಗಾಯ
newsics.com ಮುಂಬೈ: ಮಹಾರಾಷ್ಟ್ರದ ನಂದರ್ಬಾರ್ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನವೊಂದು 400 ಅಡಿ ಆಳದ ಕಮರಿಗೆ ಉರುಳಿದ್ದರಿಂದ 6 ಮಂದಿ ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.ಗಾಯಾಳುಗಳ ಪೈಕಿ 7 ಮಂದಿಯ ಸ್ಥಿತಿ...
ಹೊಸ ಫೀಚರ್ ಬಿಡುಗಡೆಗೊಳಿಸಿದ ಸಿಗ್ನಲ್ ಆಪ್
newsics.com
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿಗ್ನಲ್ ಆಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸಿಗ್ನಲ್ ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ವಾಟ್ಸಾಪ್'ನ ಕೆಲವು ಫೀಚರ್ ಗಳನ್ನು ಸೇರಿಸಿದೆ. ಹೊಸ ವಾಲ್ ಪೇಪರ್'ಗಳು, ಕಡಿಮೆ ಡೇಟಾ ಮೋಡ್,...
2021ರ ಕೇಂದ್ರ ಬಜೆಟ್ ಮೊಬೈಲ್ ಆಪ್ ಬಿಡುಗಡೆಗೊಳಿಸಿದ ವಿತ್ತ ಸಚಿವೆ
newsics.com
ನವದೆಹಲಿ: ಕೇಂದ್ರ ಬಜೆಟ್ 2021-22ರ ಭಾರತೀಯ ಸಂಸತ್ ಅಧಿವೇಶನ ಪ್ರಾರಂಭವಾಗಲು ಒಂದು ವಾರದ ಮೊದಲು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಿದರು.
ಆರ್ಥಿಕ ವ್ಯವಹಾರಗಳ ಇಲಾಖೆಯ (ಡಿಇಎ)...
ಏಮ್ಸ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ಸೋಮನಾಥ್ ಭಾರ್ತಿಗೆ 2 ವರ್ಷ ಜೈಲು
newsics.com
ನವದೆಹಲಿ: 2016ರಲ್ಲಿ ಏಮ್ಸ್ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಎಎಪಿ ಶಾಸಕ ಸೋಮನಾಥ್ ಭಾರ್ತಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಏಮ್ಸ್'ನ ಭದ್ರತಾ ವಿಭಾಗದ ಮುಖ್ಯಸ್ಥರು...
ನಾಳೆ ಭಾರತ -ಚೀನಾ ನಡುವೆ 9ನೇ ಸುತ್ತಿನ ಉನ್ನತ ಮಟ್ಟದ ಸಭೆ
newsics.com
ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಾಳೆ 9ನೇ ಸುತ್ತಿನ ಕಾಪ್ರ್ಸ್ ಕಮಾಂಡರ್ ಸಭೆ ನಡೆಯಲಿದೆ.
ಭಾರತದ ಚುಶುಲ್ ಸೆಕ್ಟರ್ ಎದುರಿನ ಮೋಲ್ಡೋದಲ್ಲಿ ಎರಡು ದೇಶಗಳ ಮಾತುಕತೆ ನಡೆಯಲಿದ್ದು, ಎಪ್ರಿಲ್...
ದೇಶದಲ್ಲಿ ಹೊಸ ಕೊರೋನಾ ಸೋಂಕಿತರ ಸಂಖ್ಯೆ 150ಕ್ಕೆ ಏರಿಕೆ
newsics.com
ನವದೆಹಲಿ: ಭಾರತದಲ್ಲಿ ಯುಕೆ ರೂಪಾಂತರ ಕೊರೋನಾ ಪರೀಕ್ಷೆ ನಡೆಸಿದವರ ಪಾಸಿಟಿವ್ ಪ್ರಕರಣಗಳ ಸಂಖ್ಯೆ 150 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ (ಜ.23) ತಿಳಿಸಿದೆ.
ಈಗಾಗಲೇ ಡೆನ್ಮಾರ್ಕ್, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಇಟಲಿ,...
ಮಹಾರಾಷ್ಟ್ರದಲ್ಲಿ ಜ.26ರಿಂದ ಜೈಲು ಪ್ರವಾಸೋದ್ಯಮ ಆರಂಭ
newsics.com
ಮಹಾರಾಷ್ಟ್ರ: ಐತಿಹಾಸಿಕ ಕಾರಾಗೃಹಗಳನ್ನು ಹತ್ತಿರದಿಂದ ನೋಡಲು ಜನರಿಗೆ ಅನುಕೂಲವಾಗುವಂತೆ ಮಹಾರಾಷ್ಟ್ರ ಸರ್ಕಾರ ಜ. 26 ರಂದು ಪುಣೆಯ ಯೆರಾವಾಡ ಜೈಲಿನಿಂದ ರಾಜ್ಯದಲ್ಲಿ 'ಜೈಲು ಪ್ರವಾಸೋದ್ಯಮ' ಪ್ರಾರಂಭಿಸಲಿದೆ ಎಂದು ಸಚಿವ ಅನಿಲ್ ದೇಶ್ಮುಖ್ ಶನಿವಾರ...
ಗಣ ರಾಜ್ಯೋತ್ಸವ ಸಮಾರಂಭದಲ್ಲಿ ರಾಮ ಮಂದಿರ ಸ್ತಬ್ಧ ಚಿತ್ರ
Newsics.com
ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆ ರಾಮ ಮಂದಿರದ ಸ್ತಬ್ದ ಚಿತ್ರ ಪ್ರದರ್ಶಿಸಲಿದೆ. ಇದು ಕೇವಲ ರಾಮ ಮಂದಿರ ವಿಷಯ ಆಧಾರಿತವಲ್ಲ . ಬದಲಾಗಿ ಅಯೋಧ್ಯೆಯ ಸಾಂಸ್ಕೃತಿಕ...
Latest News
ಹುಣಸೋಡು ಕಲ್ಲು ಕ್ವಾರಿ ಸ್ಫೋಟ ಪುಲ್ವಾಮಾ ದಾಳಿಗಿಂತ ಹತ್ತು ಪಟ್ಟು ಪ್ರಬಲ!
newsics.c com ಶಿವಮೊಗ್ಗ: ಇಲ್ಲಿನ ಹುಣಸೋಡು ಕಲ್ಲು ಕ್ವಾರಿ ಸ್ಫೋಟ ಪುಲ್ವಾಮಾ ದಾಳಿಗಿಂತ ಹತ್ತು ಪಟ್ಟು ಪ್ರಬಲವಾಗಿತ್ತು.ಪುಲ್ವಾಮ ದಾಳಿಗೆ ಉಗ್ರರು ಬಳಸಿದ್ದ ಸ್ಫೋಟಕಕ್ಕಿಂತಲೂ...
Home
400 ಅಡಿ ಆಳಕ್ಕೆ ಉರುಳಿದ ವಾಹನ; 6 ಮಂದಿ ಸಾವು, 18 ಜನರಿಗೆ ಗಾಯ
NEWSICS -
newsics.com ಮುಂಬೈ: ಮಹಾರಾಷ್ಟ್ರದ ನಂದರ್ಬಾರ್ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನವೊಂದು 400 ಅಡಿ ಆಳದ ಕಮರಿಗೆ ಉರುಳಿದ್ದರಿಂದ 6 ಮಂದಿ ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.ಗಾಯಾಳುಗಳ ಪೈಕಿ 7 ಮಂದಿಯ ಸ್ಥಿತಿ...
ಪ್ರಮುಖ
ಕ್ಷೀಣಿಸಿದ ಲಾಲೂ ಆರೋಗ್ಯ; ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು
NEWSICS -
newsics.com ರಾಂಚಿ(ಬಿಹಾರ): ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ಮತ್ತಷ್ಟು ವಿಷಮಿಸಿದ ಹಿನ್ನೆಲೆಯಲ್ಲಿ ಅವರನ್ನು ದೆಹಲಿ ಏಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಶ್ವಾಸಕೋಶದ ಸೋಂಕಿಗೆ ತುತ್ತಾಗಿರುವ ಅವರು...