Thursday, June 1, 2023

ಕಾನೂನು ಪದವಿ ವ್ಯಾಸಂಗ; ಕೋರ್ಟ್ ಮೆಟ್ಟಿಲೇರಿದ 77ರ ಅಜ್ಜಿ!

Follow Us

newsics.com
ಉತ್ತರ ಪ್ರದೇಶ: ಓದೋ ಕಾಲದಲ್ಲೇ ಓದೋಕೆ ಮಕ್ಕಳು ಹಿಂದೆ ಮುಂದೆ ನೋಡ್ತಾರೆ. ಆದರೆ ಈ 77 ರ ವೃದ್ಧೆ ಮಾತ್ರ ಈಗ ಕಾನೂನು ಪದವಿ ಪಡೆಯಲು ಮುಂದಾಗಿದ್ದು, ತಮ್ಮ ಆಸಕ್ತಿಗೆ ಅಡ್ಡಿಯಾದ ವಯೋಮಿತಿ ನಿಯಮ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಉತ್ತರ ಪ್ರದೇಶದ ಶಹಿಬಾಬಾದ್ ನಿವಾಸಿ 77 ವರ್ಷದ ರಾಜಕುಮಾರಿ ತ್ಯಾಗಿ ಪತಿ ನಿಧನದ ನಂತರ ಏಕಾಂಗಿಯಾಗಿದ್ದಾರೆ.
ತಮ್ಮ ಪತಿಯ ಜಮೀನು ಹಾಗೂ ಉಯಿಲಿನ ಬಗ್ಗೆ ಮಾಹಿತಿ ಪಡೆಯಲು ರಾಜಕುಮಾರಿ ತ್ಯಾಗಿ ಕಾನೂನು ಪದವಿ ಪಡೆಯಲು ಮುಂದಾಗಿದ್ದಾರೆ.
ಆದರೆ ಭಾರತದಲ್ಲಿ ಐದು ವರ್ಷದ ಕಾನೂನು ಪದವಿ ಪಡೆಯಲು 20 ವರ್ಷ ಗರಿಷ್ಠ ವಯೋಮಿತಿ ಆದರೆ, ಮೂರು ವರ್ಷದ ಪದವಿಗೆ 30 ವರ್ಷ ಗರಿಷ್ಠ ವಯೋಮಿತಿಯನ್ನು ಭಾರತೀಯ ವಕೀಲರ ಪರಿಷತ್ತು ನಿಗದಿಪಡಿಸಿದೆ.
ಹೀಗಾಗಿ ರಾಜಕುಮಾರಿ ಶಿಕ್ಷಣಕ್ಕೆ ವಯಸ್ಸು ಅಡ್ಡಿಯಾಗಿದ್ದು, ಇದನ್ನು ಪ್ರಶ್ನಿಸಿ ಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದಾರೆ. ಶಿಕ್ಷಣದ ಮುಂದೆ ಎಲ್ಲರೂ ಸಮಾನರಾಗಿರಬೇಕು. ಯಾವುದೇ ಕಾರಣಕ್ಕೂ ಶಿಕ್ಷಣ ನಿರಾಕರಿಸಬಾರದು ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ರಾಜಕುಮಾರಿ ತ್ಯಾಗಿ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಯಬೇಕಿದೆ.

2.17 ಕೋಟಿ ಮೌಲ್ಯದ 6.1 ಕೆಜಿ ಚರಸ್ ವಶ, ನೇಪಾಳಿಗನ ಸೆರೆ

ರಾಜ್ಯಪಾಲರನ್ನು ಭೇಟಿಯಾದ ಕಂಗನಾ

ಇಲ್ನೋಡಿ, ನಾಯಿ ಸ್ಕೇಟಿಂಗ್ ಮಾಡ್ತಿದೆ…!

30 ವರ್ಷ 3 ಕಿ.ಮೀ. ಕಾಲುವೆ ತೋಡಿ ನೀರು ಹರಿಸಿದ ಆಧುನಿಕ ಭಗೀರಥ!

ಮತ್ತಷ್ಟು ಸುದ್ದಿಗಳು

vertical

Latest News

ಅವಳಿ ಮಕ್ಕಳನ್ನು ಕಾರಿನಲ್ಲಿ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ತಂದೆ

newsics.com ದಾವಣಗೆರೆ: ಪಾಪಿ ತಂದೆಯೊಬ್ಬ ತನ್ನ ಅವಳಿಗೆ ಘಟನೆ ಉಸಿರುಗಟ್ಟಿಸಿ ಕೊಲೆಗೈದ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಅದ್ವೈತ್ (04) ಹಾಗೂ ಅನ್ವೀತ್ (04) ಮೃತಪಟ್ಟ ಮಕ್ಕಳು. ಅಮರ ಕಿತ್ತೂರು...

ತನ್ನ ಪ್ರೇಯಸಿಗೆ ಮೆಸೇಜ್ ಮಾಡಿದ ಎಂದು ಗೆಳೆಯನಿಗೆ ಚಾಕು ಇರಿದ ಯುವಕ

newsics.com ಮೈಸೂರು: ತನ್ನ ಪ್ರಿಯತಮೆಗೆ ಮೆಸೇಜ್ ಮಾಡಿದನೆಂದು ಯುವಕನೊಬ್ಬ ತನ್ನ ರೂಮೇಟ್‌ಗೆ ಚಾಕು ಇರಿದ ಪ್ರಸಂಗವೊಂದು ಅರಮನೆ ನಗರಿ ಮೈಸೂರಿನಲ್ಲಿ ನಡೆದಿದೆ. ಗಾಯಾಳುವನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ, ಈತನಿಗೆ ಸ್ನೇಹಿತ ಶ್ರೇಯಸ್ ಎಂಬಾತ ಚಾಕು...

ಉತ್ತರಾಖಂಡದಲ್ಲಿ ಭೂಕುಸಿತ: 300 ಮಂದಿ ಪ್ರಯಾಣಿಕರ ಪರದಾಟ

newsics.com ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢದಲ್ಲಿ ಭೂಕುಸಿತ ಉಂಟಾದ ಪರಿಣಾಮ ರಸ್ತೆ ಕೊಚ್ಚಿಹೋಗಿದ್ದು, 300 ಮಂದಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಲಖನ್‌ಪುರ ಬಳಿಯ ಧಾರ್ಚುಲದಿಂದ 45 ಕಿಮೀ ಎತ್ತರದ ಲಿಪುಲೇಖ್ – ತವಾಘಾಟ್ ರಸ್ತೆಗೆ ಬೆಟ್ಟ ಕುಸಿದು...
- Advertisement -
error: Content is protected !!