Monday, October 2, 2023

ಮುಂಬೈ ಕಥಾಸ್ಪರ್ಧೆ: ಡಾ.ಅಜಿತ್ ಪ್ರಥಮ, ಸದಾಶಿವಗೆ ದ್ವಿತೀಯ

Follow Us

  • ಜ.11 ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

ಮುಂಬೈ: ಇಲ್ಲಿನ ಕನ್ನಡ ಭವನ ಎಜುಕೇಷನ್ ಸೊಸೈಟಿ ಆಯೋಜಿಸಿದ್ದ ಅಖಿಲ ಭಾರತ ಕಥಾ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆ ಸೊರಬದ ಡಾ.ಅಜಿತ್ ಎಸ್. ಹರೀಶಿ ಅವರ `ಕನ್ನಡಿಗಂಟಿದ ಬಿಂದಿ’ ಪ್ರಥಮ ಸ್ಥಾನ ಪಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ದೊಡ್ಡಬೊಮ್ಮನಹಳ್ಳಿಯ ಸದಾಶಿವ ಸೊರಟೂರು ಅವರ ‘ನೀಲಿ’ ಕತೆಗೆ ದ್ವಿತೀಯ ಬಹುಮಾನ ಹಾಗೂ ಮುಂಬೈನ ಡಾ.ಕೊಳ್ಳಪ್ಪೆ ಗೋವಿಂದ ಭಟ್ ಅವರ `ಶಿಲ್ಪ ಸಹವಾಸ’ ಕತೆಗೆ ತೃತೀಯ ಬಹುಮಾನ ಲಭಿಸಿದೆ.
ಮಂಗಳೂರಿನ ದಿನಕರ ನಾಯಕ್ ಅವರ ‘ಒಂದು ಸಾವಿನ ವರದಿ’, ದಾಂಡೇಲಿಯ ನಾಗರೇಖಾ ಗಾಂವಕರ್ ಅವರ ‘ಪ್ರೀತಿಯ ಹೊಸ ಭಾಷ್ಯ’ ಕತೆಗಳು ಪ್ರೋತ್ಸಾಹಕ ಬಹುಮಾನಕ್ಕೆ ಭಾಜನವಾಗಿವೆ. ಬೆಂಗಳೂರಿನ ವಸುಂಧರಾ ಕೆ.ಎಂ. ಅವರ ‘ಭಗ’, ಮುಂಬೈನ ಹೇಮಾ ಸದಾನಂದ ಅಮೀನ್ ಅವರ ‘ರೇಷನ್ ಕಾರ್ಡ್’ ಕತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.
ಸ್ಪರ್ಧೆಯಲ್ಲಿ ಮುಂಬೈ ಹಾಗೂ ಅಖಿಲ ಕರ್ನಾಟಕದಿಂದ ಒಟ್ಟು 40 ಕತೆಗಾರರು ಪಾಲ್ಗೊಂಡಿದ್ದರು. ಕಾದಂಬರಿಕಾರ್ತಿ ಮಿತ್ರಾ ವೆಂಕಟರಾಜ್, ಕತೆಗಾರ ಗೋಪಾಲ ತ್ರಾಸಿ ಹಾಗೂ ಕತೆಗಾರ ರಾಜೀವ ನಾಯಕ್ ಪಾಲ್ಗೊಂಡಿದ್ದರು. ಜ.11 ರಂದು ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಂದೇ ‘ಮಧುರವಾಣಿ-50’ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಗೊಳ್ಳಲಿದೆ ಎಂದು ಕನ್ನಡ ಭವನ ಎಜುಕೇಷನ್ ಸೊಸೈಟಿಯ ಗೌರವ ಪ್ರಧಾನ ಕಾರ್ಯದರ್ಶಿ ಶೇಖರ ಎ. ಅಮೀನ್ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ರಸ್ತೆ ಅಪಘಾತ: ಮಗು ಸೇರಿ ಕನಿಷ್ಠ 10 ಮಂದಿ ಸಾವು

newsics.com ಮೆಕ್ಸಿಕೊ: ಟ್ರಕ್ ವೊಂದು ಅಪಘಾತಕ್ಕೆ ಒಳಗಾದ ಪರಿಣಾಮ 10 ಜನ ವಲಸಿಗರು ಸಾವನ್ನಪಿರುವ ಘಟನೆ ದಕ್ಷಿಣ ರಾಜ್ಯ ಚೈಪಾಸ್ನಲ್ಲಿ ನಡೆದಿದೆ. ಅಪಘಾತದಲ್ಲಿ 17 ಜನ ಗಾಯಗೊಂಡಿದ್ದು, ಅವರನ್ನು...

ಮೈಕಲ್ ಜಾಕ್ಸನ್ ಟೋಪಿ ಬರೋಬ್ಬರಿ 68 ಲಕ್ಷಕ್ಕೆ ಹರಾಜು

newsics.com ಜನಪ್ರಿಯ ವ್ಯಕ್ತಿಗಳು ಬಳಸಿರುವ ವಸ್ತುಗಳಿಗೆ ಭಾರಿ ಬೇಡಿಕೆ ಇರುತ್ತದೆ. ದೊಡ್ಡ ಪ್ರಮಾಣದ ಹಣ ತೆತ್ತು ಅವುಗಳನ್ನು ಖರೀದಿಸುವವರು ಇರುತ್ತಾರೆ. ಇದೀಗ ನೃತ್ಯಲೋಕದ ಅಚ್ಚಳಿಯದ ಹೆಸರು ಮೈಕಲ್ ಜಾಕ್ಸನ್ ಅವರು ಧರಿಸುತ್ತಿದ್ದ ಟೋಪಿ ಬರೋಬ್ಬರಿ...

ವಿಶ್ವದ ಎರಡನೇ ಅತಿ ದೊಡ್ಡ ಹಿಂದೂ ದೇವಾಲಯ ಲೋಕಾರ್ಪಣೆಗೆ ಸಿದ್ಧ

newsics.com ವಾಷಿಂಗ್ಟನ್: ಅಮೆರಿಕದಲ್ಲಿ ನಿರ್ಮಾಣವಾಗಿರುವ ವಿಶ್ವದ ಎರಡನೇ ಅತಿ ದೊಡ್ಡ ಹಿಂದೂ ದೇವಾಲಯ ಬಿಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮವು ಲೋಕಾರ್ಪಣೆಗೆ ಸಿದ್ಧವಾಗಿದೆ ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿ ನಿರ್ಮಾಣವಾಗಿರುವ ದೇಗುಲ ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್ 30ರಂದೇ ಆರಂಭಗೊಂಡಿದ್ದು. ಅಕ್ಟೋಬರ್...
- Advertisement -
error: Content is protected !!