newsics.com
ನವದೆಹಲಿ: ಅಗತ್ಯ ವಸ್ತುಗಳ ಪಟ್ಟಿಯಿಂದ ಈರುಳ್ಳಿ, ಆಲೂಗಡ್ಡೆ, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳು ಮತ್ತು ಖಾದ್ಯ ತೈಲಗಳನ್ನು ತೆಗದು ಹಾಕಲಾಗಿದೆ.
ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಅಗತ್ಯ ಸರಕುಗಳ ಕಾನೂನು ತಿದ್ದುಪಡಿ ಮಸೂದೆ-2020 ಅಂಗೀಕರಿಸಲಾಗಿದೆ. ಕೃಷಿ ಕ್ಷೇತ್ರದ ಸುಧಾರಣೆ ಹಾಗೂ ರೈತರ ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಲೋಕಸಭೆಯಲ್ಲಿ ಸೆಪ್ಟೆಂಬರ್ 15ರಂದು ಅಂಗೀಕಾರಗೊಂಡಿದ್ದ ಅಗತ್ಯ ಸರಕುಗಳ ಕಾನೂನು ತಿದ್ದುಪಡಿ ಮಸೂದೆ-2020ಕ್ಕೆ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ಮಸೂದೆಯಿಂದಾಗಿ ಸಿರಿಧಾನ್ಯ, ಆಹಾರಕಾಳು, ಈರುಳ್ಳಿ, ಅಲೂಗಡ್ಡೆ ಸೇರಿ ವಿವಿಧ ಆಹಾರ ಪದಾರ್ಥಗಳ ಮೇಲಿನ ನಿಯಂತ್ರಣ ನಿವಾರಣೆಯಾಗಲಿದೆ.
ಅಗತ್ಯ ವಸ್ತು ಪಟ್ಟಿಯಿಂದ ಈರುಳ್ಳಿ, ಆಲೂ, ಖಾದ್ಯ ತೈಲ, ದ್ವಿದಳ ಧಾನ್ಯ ಹೊರಕ್ಕೆ
Follow Us