Thursday, March 30, 2023

ಕೊರೋನಾ ವಿಚಾರಕ್ಕೆ ಜಗಳ, ನವದಂಪತಿ ಆತ್ಮಹತ್ಯೆ

Follow Us

newsics.com
ಚೆನ್ನೈ: ಕೊರೋನಾ ಕಾರಣಕ್ಕೆ ಪತಿ-ಪತ್ನಿ ಮಧ್ಯೆ ಆರಂಭವಾದ ಜಗಳ ಇಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ.
ಚೆನ್ನೈನ ಮಹಾಬಲಂ ಎಂಬಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಮಣಿಕಂಠನ್(35), ರಾಧಿಕಾ(25) ಆತ್ಮಹತ್ಯೆಗೆ ಶರಣಾದ ದಂಪತಿ. 10 ತಿಂಗಳ ಹಿಂದೆ ಇಬ್ಬರ ವಿವಾಹವಾಗಿತ್ತು. ಮಣಿಕಂಠನ್ ಕೆಮಿಕಲ್ ಫ್ಯಾಕ್ಟರಿಯೊಂದರ ಉದ್ಯೋಗಿಯಾಗಿದ್ದ ರಾಧಿಕಾ ಕಿಲ್ಪೌಕ್‌ನಲ್ಲಿ ಉದ್ಯೋಗ ಮಾಡುತ್ತಿದ್ದಳು. ಎರಡು ತಿಂಗಳ ಹಿಂದೆ ಮಣಿಕಂಠನ್‌ಗೆ ಕೊರೋನಾ ಸೋಂಕು ತಗುಲಿತ್ತು. ಆತ ಚಿಕಿತ್ಸೆ ಪಡೆದು ಗುಣ ಹೊಂದಿದ್ದ. ಆದರೆ, ಈ ವಿಷಯವಾಗಿ ಮನೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.
ಇದೇ ಜಗಳ ತಾರಕಕ್ಕೆ ಹೋಗಿ 15 ದಿನಗಳ ಹಿಂದೆ ರಾಧಿಕಾ ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಕಿಲ್ಪೌಕ್ ಮೆಡಿಕಲ್ ಕಾಲೇಜ್ ‌ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗುಣವಾಗಿ ಬಂದ ಆಕೆಯ ಜತೆ ಮತ್ತೆ ಮಣಿಕಂಠನ್ ಜಗಳವಾಡಿದ್ದ. ಶುಕ್ರವಾರ ಜಗಳವಾಡಿಕೊಂಡು ಮಣಿಕಂಠನ್ ಮನೆಯಿಂದ ಹೊರಹೋಗಿದ್ದ. ಆದರೆ, ರಾಧಿಕಾ ಮನೆಯಲ್ಲೇ ನೇಣು ಹಾಕಿಕೊಂಡಿದ್ದಳು. ಮನೆಗೆ ವಾಪಸಾದ ಪತಿ ಪತ್ನಿಯ ಪರಿಸ್ಥಿತಿ ನೋಡಿ ಆತನೂ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದಲ್ಲಿ ಒಂದೇ ದಿನ 86 961 ಮಂದಿಗೆ ಕೊರೋನಾ ಸೋಂಕು, 1130 ಬಲಿ

ಮೈಸೂರಿನಲ್ಲಿ ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ

ಮತ್ತಷ್ಟು ಸುದ್ದಿಗಳು

vertical

Latest News

ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

newsics.com ಬಿಹಾರ: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್. ಈ ಡಿಜಿಟಲ್ ಯುಗದಲ್ಲಿ ಯಾವುದೂ ಅಸಾಧ್ಯವಲ್ಲ ಎಂದೇ ಹೇಳಬಹುದು. ಬಿಹಾರದ 13 ವರ್ಷದ ಪ್ರತ್ಯೂಷ್ ಎಂಬ...

ಸಂಸದ ಸ್ಥಾನ ಕಸಿದುಕೊಂಡ ಕೋಲಾರಕ್ಕೆ ಮತ್ತೆ ರಾಹುಲ್‌ ಗಾಂಧಿ

newsics.com ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 2019ರ ಲೋಕಸಭೆ  ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ತಾವು ಮಾಡಿದ ಭಾಷಣಕ್ಕೆ ಮಾನನಷ್ಟ ಮೊಕದ್ದಮೆ ಗುರಿಯಾಗಿದ್ದು, ಸದ್ಯ ಸಂಸತ್‌ ಸದಸ್ಯತ್ವ ಸ್ಥಾನದಿಂದಲೇ ಅನರ್ಹಗೊಂಡಿದ್ದಾರೆ. ಈಗ ಕರ್ನಾಟಕ ವಿಧಾನಸಭಾ ಚುನಾವಣೆ...

ಈ ಬಾರಿ ಕಾಂಗ್ರೆಸ್​ಗೆ 115ಕ್ಕೂ ಹೆಚ್ಚು ಸ್ಥಾನ, BJPಗೆ 68 :ಎಬಿಪಿಸಿ ಓಟರ್ ಸಮೀಕ್ಷೆ

newsics.com ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ 115ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಜೆಡಿಎಸ್ 23 ಸ್ಥಾನಗಳನ್ನು ಪಡೆಯಬಹುದು  ಎಂದು ಎಬಿಪಿ ಸಿಓಟರ್ ಸಮೀಕ್ಷೆ ಬುಧವಾರ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್...
- Advertisement -
error: Content is protected !!