ಮುಂಬೈ: ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಸಲ್ಲಿಸಿದ್ದ ಜಾಮೀನು ಕೋರಿಕೆ ಅರ್ಜಿಯನ್ನು ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಆರೋಪಿ ಪ್ರಾಸಿಕ್ಯೂಷನ್ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವೈದ್ಯಕೀಯ ಆಧಾರದ ಮೇಲೆ ಜಾಮೀನು ಪಡೆಯಲು ವಿಫಲವಾದ ನಂತರ, ಕಳೆದ ವರ್ಷ ಡಿಸೆಂಬರ್ನಲ್ಲಿ ಮುಖರ್ಜಿ ಪ್ರಕರಣದ ಅರ್ಹತೆಗಳ ಮೇಲೆ ಜಾಮೀನು ಕೋರಿ ಮುಖರ್ಜಿ ಕಳೆದ ಡಿಸೆಂಬರ್ನಲ್ಲಿ ಮುಖರ್ಜಿ ಮತ್ತೊಂದು ಮನವಿ ಸಲ್ಲಿಸಿದ್ದರು. ವಿಶೇಷ ಸಿಬಿಐ ಕೋರ್ಟ್ ನ್ಯಾಯಾಧೀಶ ಜೆ ಸಿ ಜಗ್ಡೇಲ್ ಅವರು ಈ ಮನವಿಯನ್ನು ತಿರಸ್ಕರಿಸಿದರು.
ಆರೋಪಿ ಪೀಟರ್ ಮುಖರ್ಜಿಅವರ ಪುತ್ರ ರಾಹುಲ್ ಮುಖರ್ಜಿ ಮತ್ತು ಇಂದ್ರಾಣಿ ಮುಖರ್ಜಿ ಅವರ ಪುತ್ರಿ ವಿಧಿ ಮತ್ತು ಅವರ ಮಾಜಿ ಪತಿ ಮತ್ತು ಸಹ ಆರೋಪಿ ಸಂಜೀವ್ ಖನ್ನಾ ಅವರಂತಹ ಕೆಲವು ಪ್ರಮುಖ ಪ್ರಕರಣದ ಸಾಕ್ಷಿಯನ್ನು ಇನ್ನೂ ವಿಚಾರಣೆಗೆ ಒಳಪಡಿಸಲಾಗಿಲ್ಲ ಹೀಗಾಗಿ ಈಗ ಜಾಮೀನು ನೀಡಲಾಗದು ಎಂದು ಕೋರ್ಟ್ ಹೇಳಿದೆ.
ಶೀನಾ ಬೋರಾ ಹತ್ಯೆ ಕೇಸ್; ಇಂದ್ರಾಣಿ ಮುಖರ್ಜಿ ಜಾಮೀನು ಅರ್ಜಿ ವಜಾ
Follow Us