newsics.com
ನವದೆಹಲಿ: 2021ನೇ ಸಾಲಿನ ತನಿಖಾ ಶ್ರೇಷ್ಠತೆಗಾಗಿ ನೀಡುವ ಕೇಂದ್ರ ಗೃಹ ಸಚಿವರ ತನಿಖಾ ಶ್ರೇಷ್ಠ ಪದಕವನ್ನು ಪ್ರಕಟಿಸಲಾಗಿದೆ. ಈ ಬಾರಿ 152 ಪೊಲೀಸ್ ಅಧಿಕಾರಿಗಳಿಗೆ ಪದಕ ನೀಡಲಾಗಿದ್ದು, ಕರ್ನಾಟಕದ 6 ಪೊಲೀಸ್ ಅಧಿಕಾರಿಗಳು ಈ ಪದಕವನ್ನು ಪಡೆದಿದ್ದಾರೆ.
ಪರಮೇಶ್ ಅನಂತ್ ಹೆಗ್ಡೆ – ಡಿವೈಎಸ್ಪಿ, ಮಂಗಳೂರು ವಿಭಾಗ, ಹೆಚ್.ಎನ್.ಧರ್ಮೇಂದ್ರ – ಎಸಿಪಿ, ಸಿಸಿಬಿ, ಬೆಂಗಳೂರು, ಬಾಲಕೃಷ್ಣ.ಸಿ – ಡಿವೈಎಸ್ಪಿ, ಎಸ್.ಟಿ.ಎಫ್, ಬಿಡಿಎ, ಬೆಂಗಳೂರು, ಮನೋಜ್ ಎನ್ ಹೊವಳೆ – ಪೊಲೀಸ್ ಇನ್ಸ್ ಪೆಕ್ಟರ್, ಎಸ್ಐಟಿ, ಕೆಎಲ್ಎ ಬೆಂಗಳೂರು, ದೇವರಾಜ್ ಟಿ ವಿ – ಸರ್ಕಲ್ ಇನ್ಸ್ ಪೆಕ್ಟರ್, ಹೊನ್ನಾಳ್ಳಿ ಸರ್ಕಲ್, ದಾವಣಗೆರೆ ಜಿಲ್ಲೆ, ಶಿವಪ್ಪ ಸಟ್ಟೆಪ್ಪ ಕಮಟಗಿ – ಪೊಲೀಸ್ ಇನ್ಸ್ ಪೆಕ್ಟರ್, ಓಲ್ಡ್ ಹುಬ್ಬಳ್ಳಿ ಪೊಲೀಸ್ ಸ್ಟೇಷನ್, ಹುಬ್ಬಳ್ಳಿ ಇವರು ಪದಕವನ್ನು ಪಡೆದಿದ್ದಾರೆ.
ಅಪರಾಧ ತನಿಖೆಯ ಉನ್ನತ ವೃತ್ತಿಪರ ಗುಣಮಟ್ಟವನ್ನು ಉತ್ತೇಜಿಸಲು ಈ ಪದಕ ನೀಡಲಾಗುತ್ತದೆ.