newsics.com
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ತಂಗ್ದಾರ್-ಚೌಕಿಬಲ್ ಹೆದ್ದಾರಿಯಲ್ಲಿ ಅವಳಿ ಹಿಮಕುಸಿತದಲ್ಲಿ ಸಿಲುಕಿದ್ದ 14 ನಾಗರಿಕರನ್ನು ಭಾರತೀಯ ಸೇನೆಯ ಸಿಬ್ಬಂದಿ ರಕ್ಷಿಸಿದ್ದಾರೆ. ಇಂದು ಬೆಳಗ್ಗೆ ಹಿಮಪಾತದಿಂದಾಗಿ ತಂಗ್ಧರ್-ಚೌಕಿಬಲ್ ರಸ್ತೆಯನ್ನು ತಡೆಹಿಡಿಯಲಾಗಿತ್ತು.
ಈ ಅವಳಿ ಹಿಮಪಾತದಲ್ಲಿ ಒಂದು ಮಗು ಸೇರಿದಂತೆ 14 ನಾಗರಿಕರು ಸಿಲುಕಿಕೊಂಡಿದ್ದರು. ಅವರನ್ನು ಭಾರತೀಯ ಸೈನಿಕರು ರಕ್ಷಣೆ ಮಾಡಲಾಗಿದ್ದು, ರಕ್ಷಿಸಲ್ಪಟ್ಟ ನಾಗರಿಕರಲ್ಲಿ ತೀವ್ರ ಅಸ್ವಸ್ಥ ಹೃದ್ರೋಗಿಯೂ ಸೇರಿದ್ದಾರೆ. ನಂತರ ಅವರನ್ನು ಹತ್ತಿರದ ಸೇನಾ ಶಿಬಿರಕ್ಕೆ ಕರೆದೊಯ್ದು ಆಹಾರ ಮತ್ತು ಬಿಸಿಯೂಟವನ್ನು ನೀಡಲಾಯಿತು.
ಸಿಕ್ಕಿಬಿದ್ದ ಪ್ರಯಾಣಿಕರನ್ನು ನಂತರ ಸೇನಾ ತಂಡವು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಭಾರತೀಯ ಸೇನೆ ಹೇಳಿದೆ. ರಕ್ಷಿಸಲ್ಪಟ್ಟ ನಾಗರಿಕರು ಸಮಯೋಚಿತ ಕ್ರಮಕ್ಕಾಗಿ ಮತ್ತು ತಮ್ಮ ಜೀವಗಳನ್ನು ಉಳಿಸಿದ್ದಕ್ಕಾಗಿ ಸೇನೆಗೆ ಕೃತಜ್ಞತೆ ಸಲ್ಲಿಸಿದರು ಎಂದು ರಕ್ಷಣಾ ವಕ್ತಾರರು ಹೇಳಿದ್ದಾರೆ.
Army Men Rescue 14 Civilians Who Were Stuck Due To An Avalanche in Tanghdar-Chowkibal {Kupwara}.@adgpi@westerncomd_IA pic.twitter.com/LHmr5FX4vO
— Aatif Qayoom (@Aatif_Qayoom1) January 18, 2022