Thursday, December 7, 2023

ಮದುವೆ ಭಯಕ್ಕೆ ಮನೆ ಬಿಟ್ಟಿದ್ದ ಯುವತಿ ಈಗ ವಾಣಿಜ್ಯ ಸೇವಾ ಅಧಿಕಾರಿ!

Follow Us

newsics.com
ಉತ್ತರ ಪ್ರದೇಶ: ಮದುವೆ ಮಾಡುತ್ತಾರೆಂಬ ಭಯಕ್ಕೆ ಏಳು ವರ್ಷಗಳ ಹಿಂದೆ ಮನೆ ಬಿಟ್ಟು ಓಡಿಹೋಗಿದ್ದ ಯುವತಿಯೊಬ್ಬಳು ಈಗ ವಾಣಿಜ್ಯ ಸೇವಾ ಅಧಿಕಾರಿ.
ಓದುವ ಮಹದಾಸೆಯಿಂದ ಕಡಿಮೆ ಹಣದೊಂದಿಗೆ 2013 ರಲ್ಲಿ ಮನೆ ಬಿಟ್ಟು ಹೋಗಿದ್ದ ಉತ್ತರ ಪ್ರದೇಶದ ಮೀರತ್ ನ 28 ವರ್ಷದ ಯುವತಿ ಈಗ ವಾಣಿಜ್ಯ ಸೇವಾ ಅಧಿಕಾರಿಯಾಗಿ ಮನೆಗೆ ಮರಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಓದುತ್ತಿರುವಾಗ ಸಂಜು ರಾಣಿ ವರ್ಮಾ ತಾಯಿಯನ್ನು ಕಳೆದುಕೊಂಡಳು. ಬಳಿಕ ಆಕೆಯ ಕುಟುಂಬ ಓದುವುದನ್ನು ಬಿಟ್ಟು ಮದುವೆಯಾಗುವಂತೆ ಒತ್ತಡ ಹೇರಿತು. ಮಹಿಳೆಯರ ಶಿಕ್ಷಣ ಪ್ರೋತ್ಸಾಹಿಸದ ಕುಟುಂಬದಲ್ಲಿ ಜನಿಸಿದ ವರ್ಮಾ ಬೇರೆ ದಾರಿ ಕಾಣದೆ ತನ್ನ ಮಹತ್ವಾಕಾಂಕ್ಷೆ ಸಾಕಾರಗೊಳಿಸಿಕೊಳ್ಳಲು ಬೇರೆ ದಾರಿ ಕಾಣದೆ ಮನೆ ಬಿಡಲು ನಿರ್ಧರಿಸಿದರು.
ಮೀರತ್’ನಲ್ಲಿ ಅಪಾರ್ಟ್ಮೆಂಟ್’ನಲ್ಲಿ ಒಂದು ಸಣ್ಣ ಮನೆ ಬಾಡಿಗೆಗೆ ಪಡೆದರು. ಅಲ್ಲಿ ಅವರು ಖಾಸಗಿ ಬೋಧನಾ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಖಾಸಗಿ ಸಂಸ್ಥೆಗಳಲ್ಲಿ ಅರೆಕಾಲಿಕ ಬೋಧಕರಾದರು. ಇದೇ ವೇಳೆ ಸಾರ್ವಜನಿಕ ಸೇವಾ ಆಯೋಗ (ಪಿಎಸ್‌ಸಿ) ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಈ ಮಧ್ಯೆ, ಯುಪಿಎಸ್ಸಿ -2018 ಪರೀಕ್ಷೆ ಬರೆದರು. ಅದರ ಫಲಿತಾಂಶ ಕಳೆದ ವಾರ ಪ್ರಕಟವಾಗಿದ್ದು, ವಾಣಿಜ್ಯ ಸೇವಾ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಆದರೆ ವರ್ಮಾ ಅವರು ನಾಗರಿಕ ಸೇವಾ ಪರೀಕ್ಷೆ ಬರೆದು ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗುವ ಗುರಿ ಹೊಂದಿದ್ದಾರೆ. ಜತೆಗೆ ತನ್ನ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಲು ಬಯಸಿದ್ದಾರೆ.

ಸ್ಥೂಲದೇಹಿ, ಮಧುಮೇಹಿಗಳಿಗೆ ಕೊರೋನಾ ಅಪಾಯ ಅಧಿಕ

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ...

ಊಟ ಕೇಳಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಿತ್ತು ಚಾಟಿ ಏಟು

newsics.com ಹಾವೇರಿ : ಊಟ ಕೇಳಿದ ವಿಧ್ಯಾರ್ಥಿಗಳಿಗೆ ವಾರ್ಡನ್ ಚಾಟಿ ಏಟು ಕೊಟ್ಟಿರುವಂತಹ ಅಮಾನವೀಯ ಘಟನೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಹಾವೇರಿಯಲ್ಲಿ ನಡೆದಿದೆ. ರಾಣೇಬೆನ್ನೂರು ನಗರದ ಅಂಬೇಡ್ಕರ್ ವಸತಿ...

ಹೊತ್ತಿ ಉರಿದ ಕಾರು – ಟಿಪ್ಪರ್ : ಇಬ್ಬರು ಸಜೀವ ದಹನ

Newsics.com ಬೆಳಗಾವಿ : ಕಾರು ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ, ಬಾಲಕಿ ಸೇರಿ ಇಬ್ಬರು ಸಜೀವ ದಹನವಾದರೆ ಮತ್ತಿಬ್ಬರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಬೆಳಗಾವಿ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ...
- Advertisement -
error: Content is protected !!