newsics.com
ವಯನಾಡು (ಕೇರಳ): ಪ್ರವಾಸಕ್ಕೆ ಬಂದಿದ್ದ ಯುವತಿ ಆನೆ ದಾಳಿಗೆ ಬಲಿಯಾಗಿದ್ದಾಳೆ.
ಈ ಘಟನೆ ಕೇರಳದ ವಯನಾಡಿನಲ್ಲಿ ನಡೆದಿದೆ.
ಕೇರಳದ ಕಣ್ಣೂರಿನ ಚೆಲೇರಿ ಮೂಲದ ಶಹಾನ್ (26) ಎಂಬ ಯುವತಿ ವಯನಾಡಿಗೆ ಬಂದಿದ್ದಳು. ಈಕೆಗೆ ಮೆಪ್ಪಾಡಿ ಪಟ್ಟಣದಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ಟೆಂಟ್ ಹಾಕಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಟೆಂಟ್ ಬಳಿ ಈಕೆಯ ಮೇಲೆ ಆನೆ ದಾಳಿ ಮಾಡಿದೆ.
ತೀವ್ರವಾಗಿ ಗಾಯಗೊಂಡ ಶಹಾನ್ರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ.
ಚಿರತೆಯ ಹತ್ಯೆ ಮಾಡಿ ಮಾಂಸ ತಿಂದ ಐವರ ಬಂಧನ