Wednesday, May 31, 2023

ಅವಧಿಪೂರ್ವ ಜನಿಸಿದ ಹಸುಗೂಸು ಕೊಂದ ಅಜ್ಜಿ!

Follow Us

ಬೆಂಗಳೂರು: ಅವಧಿಪೂರ್ವ ಹೆಣ್ಣುಮಗು ಜನಿಸಿತೆಂಬ  ಕಾರಣಕ್ಕೆ ಎಂಟು ತಿಂಗಳ ಹಸುಗೂಸನ್ನೇ ಸ್ವಂತ ಅಜ್ಜಿಯೇ ಒಂದನೇ ಮಹಡಿಯಿಂದ ಕೆಳಕ್ಕೆಸೆದು ಕೊಂದಿದ್ದಾಳೆ.ಹಸುಗೂಸನ್ನು ಕೊಂದ ಆರೋಪದ ಮೇಲೆ ತಮಿಳುನಾಡಿನ ತಿರುಚ್ಚಿ ಮೂಲದ ಪರಮೇಶ್ವರಿ (60) ಎಂಬುವರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬೆಂಗಳೂರಿನ ಮೇದರಹಳ್ಳಿಯಲ್ಲಿ ವಾಸವಿರುವ ಮಾರ್ಷಲ್‌ ಮತ್ತು ತಮಿಳುಸೆಲ್ವಿ ದಂಪತಿ ಹಾಲಿನ ಬೂತ್‌ ನಡೆಸುತ್ತಿದ್ದಾರೆ. 8 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ತಮಿಳುಸೆಲ್ವಿಗೆ ಹೆಣ್ಣು ಮಗು ಜನಿಸಿತ್ತು. ಮಗು ಅವಧಿಪೂರ್ವವಾಗಿ ಜನಿಸಿದ್ದು, ಜಾಂಡೀಸ್ ಕಾಣಿಸಿಕೊಂಡಿತ್ತು. ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ಮಗುವನ್ನು ಮನೆಗೆ ಕರೆತರಲಾಗಿತ್ತು.ಶನಿವಾರ ರಾತ್ರಿ ಕೆಲಸದ ಮೇಲೆ ಮಾರ್ಷಲ್‌ ಮನೆಯಿಂದ ಹೊರ ಹೋಗಿದ್ದರು. ತಮಿಳುಸೆಲ್ವಿ ಬಾತ್‌ರೂಮ್‌ಗೆ ತೆರಳಿದ್ದರು. ಈ ವೇಳೆ ಮಗುವನ್ನು ನೋಡಿಕೊಳ್ಳುತ್ತಿದ್ದ ಮಾರ್ಷಲ್‌ ತಾಯಿ ಪರಮೇಶ್ವರಿ, ಮಗುವನ್ನು ತೆಗೆದುಕೊಂಡು ಮನೆಯ ಮಹಡಿಯಿಂದ ಹಿಂಭಾಗದ ಖಾಲಿ ಜಾಗಕ್ಕೆ ಬಿಸಾಡಿ ಏನೂ ಗೊತ್ತಿಲ್ಲದಂತೆ ಸುಮ್ಮನಾಗಿದ್ದರು. ಮಗು ಕಾಣಿಸದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ”ಮಾಹಿತಿ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿದರು. ಮನೆಯ ಒಳಗೆ, ಹೊರಗೆ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಕೆಳಗೆ ಬಿದ್ದಿದ್ದ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗೆ ಮೃತಪಟ್ಟಿತ್ತು.

ಮತ್ತಷ್ಟು ಸುದ್ದಿಗಳು

vertical

Latest News

ಪುಷ್ಪಾ 2 ಶೂಟಿಂಗ್‌ ಮುಗಿಸಿ ವಾಪಸ್ ತೆರಳಿದ್ದ ಕಲಾವಿದರ ಬಸ್‌ ಅಪಘಾತ

newsics.com ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ 2' ಸಿನಿಮಾದಲ್ಲಿ ನಟಿಸುತ್ತಿದ್ದ ಸಹ ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಿ ವಾಪಸ್ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ತೆಲಂಗಾಣದ...

ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಚಿನ್ನ ಕದ್ದ ಕಳ್ಳರು

newsics.com ಹೈದರಾಬಾದ್: ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಹೈದರಾಬಾದ್‌ನ ಅಂಗಡಿಯೊಂದರಲ್ಲಿ 60 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ರೆಹಮಾನ್...

ಮಲಯಾಳಂ ಚಿತ್ರರಂಗದ ಖ್ಯಾತ ನಟ ಹರೀಶ್ ಪೆಂಗನ್ ನಿಧನ

newsics.com ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ಪೆಂಗನ್ ಅವರು ಮಂಗಳವಾರ (ಮೇ 30) ನಿಧನ ಹೊಂದಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ ಕೆಲ ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು....
- Advertisement -
error: Content is protected !!