Monday, October 2, 2023

ಮಲ್ಲಿಗೆ ಕೃಷಿಯಲ್ಲಿ ಆದಾಯದ ಮಾರ್ಗ ಹುಡುಕಿದ ನ್ಯಾಯವಾದಿ

Follow Us

newsics.com

ಮಂಗಳೂರು: ಲಾಕ್ ಡೌನ್ ನಿಂದ ದೇಶದಲ್ಲಿ  ನ್ಯಾಯಾಲಯದ ಕಲಾಪ ಕೂಡ  ಸ್ಥಗಿತಗೊಂಡಿತ್ತು. ಇದರಿಂದ ಹೆಚ್ಚು ತೊಂದರೆಗೆ ಒಳಗಾದವರು ಯುವ ವಕೀಲರು. ನಿರ್ದಿಷ್ಟವಾದ ಆದಾಯ ಮಾರ್ಗಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹೊತ್ತಿನಲ್ಲಿ  ಮಂಗಳೂರು ಸಮೀಪದ ಮಹಿಳಾ ನ್ಯಾಯವಾದಿಯೊಬ್ಬರು ಕಂಡು ಕೊಂಡ ಮಾರ್ಗ ಮಲ್ಲಿಗೆ ಕೃಷಿ .

ಮಲ್ಲಿಗೆ ಕೃಷಿ ಅವರ ಕನಸನ್ನು ಭಗ್ನಗೊಳಿಸಲಿಲ್ಲ. ಕೈ  ಹಿಡಿದು ಮೇಲಕ್ಕೆ ಎತ್ತಿತ್ತು. ಶಂಕರಪುರ ಮಲ್ಲಿಗೆ ಅಂದರೆ ಉಡುಪಿ ಮಲ್ಲಿಗೆಯ ಕೃಷಿಯನ್ನು ಆರಂಭಿಸಿದ ವಕೀಲೆ ಕಿರಣ್ ದೇವಾಡಿಗ  ಇದರಲ್ಲಿ ಯಶಸ್ಸು ಗಳಿಸಿದ್ದಾರೆ. ಇದುವರೆಗೆ 85,000 ರೂಪಾಯಿ ಆದಾಯ ಗಳಿಸಿದ್ದಾರೆ.

ಉಡುಪಿ ಮಲ್ಲಿಗೆ ಅದರ ಸುವಾಸನೆಗೆ ಹೆಸರುವಾಸಿಯಾಗಿದೆ. ಕರಾವಳಿಯಲ್ಲಿ ಇದಕ್ಕೆ ಉತ್ತಮ ಮಾರುಕಟ್ಟೆ ಇದೆ. ವಿದೇಶಗಳಿಗೂ  ರಫ್ತು ಮಾಡಲಾಗುತ್ತಿದೆ.

ಮನೆಯ ಟೆರೇಸ್ ನಲ್ಲಿ ಮಲ್ಲಿಗೆ ಕೃಷಿ ಆರಂಭಿಸಿರುವ ಕಿರಣ್ ದೇವಾಡಿಗ ಯು ಟ್ಯೂಬ್ ಚಾನೆಲ್ ಮೂಲಕ ಇದರ ಬಗ್ಗೆ ತಿಳಿದುಕೊಂಡಿದ್ದರು. ಜತೆಗೆ ಇತರ ಮಲ್ಲಿಗೆ ಕೃಷಿ ಬೆಳೆಸುವವರ ಜತೆ ಸಮಾಲೋನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದರು.

ಅವರ ನಿರಂತರ ಪ್ರಯತ್ನ ಮತ್ತು ಕಾಳಜಿ ಪರಿಣಾಮವಾಗಿ ಅವರ ಮನೆಯ ಟೆರೇಸ್ ನಲ್ಲಿರುವ ಮಲ್ಲಿಗೆ ಗಿಡಗಳು ಅವರಿಗೆ ಆದಾಯ ತರುವ ಮಾರ್ಗಗಳಾಗಿ ಪರಿವರ್ತನೆಗೊಂಡಿವೆ.

ವಿವಾಹ ನೋಂದಣಿಗೆ ನೇರ ಉಪಸ್ಥಿತಿ ಅಗತ್ಯ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪು

 

 

ಮತ್ತಷ್ಟು ಸುದ್ದಿಗಳು

vertical

Latest News

ನಾಳೆಯಿಂದ ಕುಮಾರ ಪರ್ವತ ಚಾರಣಕ್ಕೆ ನಿರ್ಬಂಧ

newsics.com ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತಕ್ಕೆ ಚಾರಣ ಹೋಗಲು ನಾಳೆಯಿಂದ(ಅ. 3) ನಿರ್ಬಂಧ ವಿಧಿಸಲಾಗಿದೆ. ಪ್ರಸ್ತುತ ಜಿಲ್ಲೆಯಾದ್ಯಂತ...

ಚಿನ್ನ, ಬೆಳ್ಳಿ ದರ ಸ್ಥಿರ

Newsics.com ಬೆಂಗಳೂರು: ಕಳೆದ ವಾರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದ ಚಿನ್ನ ಬೆಳ್ಳಿಯ ದರ ಈ ವಾರ ಸ್ಥಿರಗೊಂಡಿದೆ. ದೇಶದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 53,350 ರೂ., 24 ಕ್ಯಾರಟ್ 10 ಗ್ರಾಂ...

ವಿಮಾನದ ತುರ್ತು ಬಾಗಿಲು ತೆರೆಯಲೆತ್ನಿಸಿದ ಪ್ರಯಾಣಿಕ: ತುರ್ತು ಭೂ ಸ್ಪರ್ಶ, ಬಂಧನ

newsics.com ದೇವನಹಳ್ಳಿ: ಟೇಕ್ಆಫ್ ಆಗುತ್ತಿದ್ದ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸ್ವಪ್ನೋಲ್ ಹೋಲೆ ಬಂಧಿತ ಪ್ರಯಾಣಿಕ. ಸ್ವಪ್ನೋಲ್ ಇಂಡಿಗೋ...
- Advertisement -
error: Content is protected !!