Thursday, June 1, 2023

ನೀರಲ್ಲಿ ಮುಳುಗಿ ಮೃತಪಟ್ಟ ತಂದೆ, ಮಗ

Follow Us

ಮೈಸೂರು: ಲಕ್ಷ್ಮಣತೀರ್ಥ ನದಿಯ ಹಿನ್ನೀರಿನಲ್ಲಿ ದನ ತೊಳೆಯಲು ಹೋದ ತಂದೆ ಮಗ ಮುಳುಗಿ ಮೃತಪಟ್ಟ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಮುಲೆಪೆಟ್ಲುನಲ್ಲಿ ಶುಕ್ರವಾರ ನಡೆದಿದೆ.
ಸುರೇಶ್ (45) ಮತ್ತು ಆತನ ಮಗ ವಿಕಾಸ್ (16) ಮೃತಪಟ್ಟ ತಂದೆ ಮಗ. ಸುರೇಶ್ ಮತ್ತು ವಿಕಾಸ್ ಹಿನ್ನೀರಿನ ಬಳಿ ಬುಧವಾರ ದನ ಮೇಯಿಸಲು ತೆರಳಿದ್ದರು. ಸುರೇಶ್ ಅವರು ದನಗಳನ್ನು ತೊಳೆಯಲು ನೀರಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಗಾಳಿ, ಮಳೆ ಪ್ರಾರಂಭವಾದ್ದರಿಂದ ಬೆದರಿದ ದನ ಹಗ್ಗ ಹಿಡಿದಿದ್ದ ಸುರೇಶ್ ಅವರನ್ನು ನೀರಿಗೆ ಎಳೆದಿದೆ. ಮುಳುಗುತ್ತಿದ್ದ ತಂದೆಯನ್ನು ರಕ್ಷಿಸಲು ಪುತ್ರ ವಿಕಾಸ ಸಹ ನೀರಿಗೆ ಧುಮುಕಿದ್ದಾರೆ. ಆದರೆ, ನದಿಯಲ್ಲಿ ಮರಳು ತೆಗೆದು ಆಳವಾದ ಗುಂಡಿಗಳು ಇದ್ದದ್ದರಿಂದ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈಜುಗಾರರ ಸಹಾಯದಿಂದ ಶವಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಪೊಲೀಸರು ಶವಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಘಟನೆ ಸಂಬಂಧ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಉತ್ತರಾಖಂಡದಲ್ಲಿ ಭೂಕುಸಿತ: 300 ಮಂದಿ ಪ್ರಯಾಣಿಕರ ಪರದಾಟ

newsics.com ಡೆಹ್ರಾಡೂನ್: ಉತ್ತರಾಖಂಡದ ಪಿಥೋರಗಢದಲ್ಲಿ ಭೂಕುಸಿತ ಉಂಟಾದ ಪರಿಣಾಮ ರಸ್ತೆ ಕೊಚ್ಚಿಹೋಗಿದ್ದು, 300 ಮಂದಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಲಖನ್‌ಪುರ ಬಳಿಯ ಧಾರ್ಚುಲದಿಂದ 45 ಕಿಮೀ ಎತ್ತರದ ಲಿಪುಲೇಖ್...

ಫ್ರೀ ಎಜುಕೇಷನ್ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ 18 ಕೋಟಿ ರೂ. ಪಂಗನಾಮ

newsics.com ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಕೊಡಿಸುವುದಾಗಿ 18 ಕೋಟಿ ರೂ. ವಂಚಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಆಂಧ್ರಪ್ರದೇಶ ಮೂಲದ ಶ್ರೀನಿವಾಸುಲು ಎಂದು ಗುರುತಿಸಲಾಗಿದೆ. ಆರೋಪಿ ಡಾಟ ಸೈನ್ಸ್ ಕೋರ್ಸ್ ಮಾಡಿಸುವುದಾಗಿ...

ಚಾಮರಾಜನಗರ ಬಳಿ‌ ಲಘು‌ ವಿಮಾನ ಪತನ

newsics.com ಚಾಮರಾಜನಗರ: ಇಲ್ಲಿನ ಎಚ್‌. ಮೂಕಳ್ಳಿ ಬಳಿ ಲಘು ವಿಮಾನವೊಂದು ಗುರುವಾರ ಪತನಗೊಂಡಿದೆ. ವಿಮಾನದಲ್ಲಿದ್ದ ಇಬ್ಬರು ಪ್ಯಾರಾಚೂಟ್ ಬಳಸಿ‌ ಜಿಗಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳದುಬಂದಿದೆ. ಬಿದ್ದ ರಭಸಕ್ಕೆ ವಿಮಾನ ಛಿದ್ರ ಛಿದ್ರವಾಗಿದ್ದು, ಅದರ ಬಿಡಿ...
- Advertisement -
error: Content is protected !!