Monday, December 11, 2023

ಅಕ್ಕಿ ದರ ದಿಢೀರ್ ಹೆಚ್ಚಳ, ಬೇಳೆಕಾಳು ತುಸು ಅಗ್ಗ

Follow Us

newsics.com

ಬೆಂಗಳೂರು: ತೈಲಬೆಲೆಯ ಏರಿಕೆಯಿಂದಾಗಿ ಸಾಗಣೆ ವೆಚ್ಚ ಹೆಚ್ಚಿದ್ದರಿಂದ ಅಕ್ಕಿಯ ಬೆಲೆ ಕ್ಬಿಂಟಾಲ್’ಗೆ 200 ರೂ. ಹೆಚ್ಚಳವಾಗಿದೆ.

ಬಾಸುಮತಿ ಅಕ್ಕಿ‌ ಸೇರಿದಂತೆ‌ ಉಳಿದೆಲ್ಲ ಬಗೆಯ ಅಕ್ಕಿ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಆದರೆ ಉತ್ತರ ಕರ್ನಾಟಕ ಕಡೆಯಿಂದ ಪೂರೈಕೆಯಾಗುವ ಸೋನ ಮಸೂರಿ, ಕೋಲಂ, ಸ್ಟೀಮ್ ರೈಸ್ ಮತ್ತಿತರ ಬಗೆಯ ಅಕ್ಕಿ ಪ್ರತಿ‌ ಕ್ವಿಂಟಾಲ್ ಗೆ ಈ‌ ಮೊದಲಿನ ನಿಗದಿತ ದರಕ್ಕಿಂತ 200 ರೂ. ಏರಿಕೆಯಾಗಿದೆ.

ಲಾಕ್’ಡೌನ್ ತೆರವಾಗುತ್ತಿದ್ದಂತೆ ಅಕ್ಕಿ ದರ ಏರಿಕೆ ಗಮನಕ್ಕೆ ಬಂದಿದ್ದು, ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈ ಹಿಂದೆ ಕೋಲಂ (ಬುಲೆಟ್‌ ರೈಸ್‌ )ಅಕ್ಕಿ ಬೆಲೆ ಕೆ.ಜಿ.ಗೆ 68 ರೂ.ಆಗಿತ್ತು. ಆದರೆ ಗುರುವಾರ ಅದು 70ರೂ.ಗೆ ಮಾರಾಟವಾಗಿದೆ. 48 ರೂ. ಇದ್ದ ಸೋನ ಮಸೂರಿ ಈಗ ಕೆ.ಜಿಗೆ 50 ರೂ.ಆಗಿದೆ. ಜತೆಗೆ ಸ್ಟೀಮ್‌ ರೈಸ್‌ ಕೆ.ಜಿ.ಗೆ 44 ರೂ.ಇತ್ತು. ಅದು ಈಗ 46 ರೂ.ಗೆ ಏರಿಕೆಯಾಗಿದೆ.

ರಾಯಚೂರು ಮೂಲದ ಸೋನ ಮಸೂರಿ ಸೇರಿದಂತೆ ಇನ್ನಿತರ ಅಕ್ಕಿಯ ಬೆಲೆಯಲ್ಲಿ ಕ್ವಿಂಟಲ್‌ಗೆ 200 ರೂ. ಹೆಚ್ಚಳವಾಗಿದೆ ಎಂದು ಬೆಂಗಳೂರು ಗ್ರೇನ್ ಮರ್ಚೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಪ್ರಸನ್ನ ಕುಮಾರ್‌ ಹೇಳಿದ್ದಾರೆ.

ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಅಧಿಕ ಪ್ರಮಾಣದಲ್ಲಿ ಬೇಳೆಕಾಳು ರಫ್ತಾಗುತ್ತಿರುವುದರಿಂದ ಕೆಲವು ಆಹಾರ ಧಾನ್ಯಗಳ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಉದ್ದಿನಬೆಳೆ ಈ ಹಿಂದೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆ.ಜಿಗೆ 105ರೂ.ಇತ್ತು ಅದು ಈಗ 90 ರೂ.ಗೆ ಇಳಿದಿದೆ. ತೊಗರಿಬೇಳೆ ಕೆ.ಜಿ.ಗೆ 100 ರೂ.ಇತ್ತು. ಅದೀಗ 92 ರೂ ಆಗಿದೆ. ಹೆಸರು ಬೇಳೆ 98 ರೂ.ದಿಂದ 90 ರೂ.ಗೆ ಇಳಿದಿದೆ. ಹಾಗೆಯೇ ಹೆಸರು ಕಾಳು 85 ರೂದಿಂದ 75 ರೂ.ಗೆ ಇಳಿಕೆಯಾಗಿದೆ.

ವಿದೇಶಿ ಶಕ್ತಿಗೆ ಬೆಂಬಲ: ಐವರು ಸಂಪಾದಕರು, ಸಿಇಓಗಳ‌ ಬಂಧನ

ಭಗ್ನ ಪ್ರೇಮಿಯಿಂದ ಯುವತಿಯ ಬರ್ಬರ ಹತ್ಯೆ, ಸಹೋದರಿ ಮೇಲೆ ಕೂಡ ಹಲ್ಲೆ

ಚಿಕನ್ ಬಿರಿಯಾನಿಯಲ್ಲಿ ಕಡಿಮೆ ಚಿಕನ್ ನೀಡಿದ್ದಕ್ಕೆ ಹೊಡೆದಾಟ

ಮತ್ತಷ್ಟು ಸುದ್ದಿಗಳು

vertical

Latest News

ನಿನ್ಗೆ ಹುಚ್ಚು ನಾಯಿ ಕಚ್ಚಿದ್ಯಾ? ; ಬಿಜೆಪಿ ವಿರುದ್ಧ ಲಕ್ಷ್ಮಣ್‌ ಸವದಿ ಕೆಂಡಾಮಂಡಲ

  newsics.com ಬೆಳಗಾವಿ: ರೈತರು  ದೇವರ ಸಮಾನ,  ರೈತರ ಹಣ ತಿಂದ ಮಾಲೀಕರು ಉದ್ಧಾರ ಆಗಲ್ಲ. ಅವರಿಗೆ ಮೋಸ ಮಾಡಬೇಡಿ ಎಂದು  ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದ ವೇಳೆ...

ಹಸುಗಳ ಮೇಲೆ ಆ್ಯಸಿಡ್‌ ಎರಚಿದ ಬೆಂಗಳೂರಿನ ವೃದ್ಧೆ

newsics.com ನೆಲಮಂಗಲ:  ಮನೆ ಬಳಿ ಮೇಯಲು ಬಂದ ಹಸುಗಳ ಮೇಲೆ ಆ್ಯಸಿಡ್ ಎರಚಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಜೋಸೆಫ್ ಗ್ರೇಸ್ (76 ವರ್ಷ)  ಎನ್ನುವ ಮಹಿಳೆ ಮನೆ...

ಆಸ್ತಿಗಾಗಿ ತಂದೆ-ತಾಯಿಯನ್ನೇ ಕೊಲೆಗೈದಿದ್ದ ಮಗ ಅರೆಸ್ಟ್​

newsics.com ದೇವನಹಳ್ಳಿ:  ಆಸ್ತಿಗಾಗಿ ಹೆತ್ತ ತಂದೆ-ತಾಯಿಯನ್ನೇ ಕೊಲೆಗೈದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಮಗ ನರಸಿಂಹಮೂರ್ತಿ ತಪ್ಪೊಪ್ಪಿಕೊಂಡಿದ್ದಾನೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ವೃದ್ಧ ದಂಪತಿ ಯನ್ನು ಕೊಲೆಗೈದಿದ್ದ ಮಗನನ್ನು ಪೊಲೀಸರು...
- Advertisement -
error: Content is protected !!