Wednesday, May 31, 2023

ಗರ್ಭಿಣಿ ಮೇಘನಾರಾಜ್’ಗೆ ಧೈರ್ಯ ತುಂಬಿದ ನಟಿಯರು

Follow Us

newsics.com
ಬೆಂಗಳೂರು: ತಾಯ್ತನ ಅನ್ನೋದು ಹೆಣ್ಣಿನ ಬದುಕಿನ ಮಹತ್ವದ ಘಳಿಗೆ. ಆದರೆ ನಟಿ ಮೇಘನಾರಾಜ್ ಮಾತ್ರ ಈ ಹೊತ್ತಿನಲ್ಲಿ ಯಾರಿಗೂ ಬರಬಾರದಂತ ದುಃಖ ಅನುಭವಿಸುತ್ತಿದ್ದಾರೆ. ಆದರೆ ಅವರ ಈ ನೋವನ್ನು ಕಡಿಮೆ‌ ಮಾಡೋಕೆ ಸ್ಯಾಂಡಲ್’ವುಡ್ ನಟಿಯರು ಪ್ರಯತ್ನಿಸಿದ್ದು, ಮೇಘನಾರಾಜ್ ಅವರನ್ನು ಸಂತೈಸುವ ಪ್ರಯತ್ನ ಮಾಡಿದ್ದಾರೆ.
ನಟಿ ಮೇಘನಾರಾಜ್ ಈಗ ತುಂಬು ಗರ್ಭಿಣಿ. ಆದರೆ ಈ ಸಂಭ್ರಮದ ಜತೆ ಪತಿ ಚಿರಂಜೀವಿ ಸರ್ಜಾ ಕಳೆದುಕೊಂಡ ನೋವು ಅವರನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ. ಮೇಘನಾ ರಾಜ್ ಈ ನೋವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ಯಾಂಡಲ್ವುಡ್ ಹಿರಿಯ ನಟಿಯರಾದ ಸುಧಾರಾಣಿ, ಶೃತಿ, ಮಾಳವಿಕಾ ಅವರ ಮನೆಗೆ ಭೇಟಿ‌ ನೀಡಿದ್ದಾರೆ.
ಅಷ್ಟೇ ಅಲ್ಲ, ತಾಯ್ತನದ ವೇಳೆ ಹೇಗೆ ಖುಷಿಯಾಗಿ ಇರಬೇಕು. ಏನೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ಮೇಘನಾಗೆ ತಿಳಿವಳಿಕೆ ಹೇಳಿ ಆಕೆಯ ಜತೆಗೆ ನಾವೆಲ್ಲ ಇದ್ದೇವೆ ಎಂಬ ಭಾವನೆ ಮೂಡಿಸಿ ಸಂತೈಸಿದ್ದಾರೆ.
ಎಲ್ಲ ಸೇರಿ ಪ್ರಮೀಳಾ ಜೋಷಾಯ್ ಕೈಯಲ್ಲಿ ಮಸಾಲೆ ದೋಸೆ ಸವಿದು ಮರಳಿದ್ದಾರೆ. ಜತೆಗೆ ಒಂದಷ್ಟು ಪೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

Weekend With Ramesh; ಸಾಧಕರ ಕುರ್ಚಿಯಲ್ಲಿ ಡಿಕೆ ಶಿವಕುಮಾರ್!

newsics.com ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ. ಭಾನುವಾರದ ಎಪಿಸೋಡ್...

ತರಬೇತಿ ವಿಮಾನ ತುರ್ತು ಭೂಸ್ಪರ್ಶ; ತಪ್ಪಿದ ಭಾರೀ ಅನಾಹುತ

newsics.com ಬೆಳಗಾವಿ: ತರಬೇತಿ ವಿಮಾನವೊಂದು ತಾಂತ್ರಿಕ ತೊಂದರೆಯಿಂದ  ತುರ್ತು ಭೂಸ್ಪರ್ಶ ಆಗಿದೆ. ಈ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದಲ್ಲಿ ನಡೆದಿದೆ. ರೆಡ್‌ಬರ್ಡ್  ಸಂಸ್ಥೆಗೆ ಸೇರಿದ VT- RBF ತರಬೇತಿ ವಿಮಾನ ಇದಾಗಿದ್ದು, ಘಟನೆ ನಡೆದ...

ಆಪರೇಷನ್ ಪಠ್ಯ ಪುಸ್ತಕ; ಪಠ್ಯಗಳ ಪರಿಷ್ಕರಿಸ್ತೇವೆಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ

newsics.com ಬೆಂಗಳೂರು:  ಪಠ್ಯ ಪುಸ್ತಕ  ಪರಿಷ್ಕರಣೆ ನಾವು ಮಾಡ್ತೀವಿ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಪರಿಷ್ಕರಣೆ ಮಾಡ್ತೀವಿ. ಮಕ್ಕಳ ಮನಸ್ಸಿನಲ್ಲಿ ಕಲ್ಮಶ ತುಂಬುವ ಪಠ್ಯ ಕೈ ಬಿಡ್ತೀವಿ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಚರ್ಚಿಸಿ...
- Advertisement -
error: Content is protected !!