Wednesday, May 31, 2023

ಬಿಯರ್ ಬದಲು ರಮ್ ಕುಡಿಸಲು ಅಬಕಾರಿ ಇಲಾಖೆ ಒತ್ತಡ

Follow Us

ಬೆಂಗಳೂರು: ಒಂದೆಡೆ ಮದ್ಯವರ್ಜನ ಶಿಬಿರ, ಇನ್ನೊಂದೆಡೆ ಕುಡಿಯಲು ಪ್ರೋತ್ಸಾಹಿಸುವ ಅಬಕಾರಿ ಇಲಾಖೆ. ಇದೆಂಥ ವಿಚಿತ್ರ!
ಬಿಯರ್ ಬದಲು ವಿಸ್ಕಿ, ರಮ್ ಕುಡಿಸಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದ ಅಂಗಡಿ ಮಾಲೀಕರಿಗೆ ಒತ್ತಡ ಹೇರುತ್ತಿದ್ದಾರೆ.
ಬೆಂಗಳೂರಿನ ನೈಟ್‌ಲೈಫ್ ಅವಧಿ ರಾತ್ರಿ 11ರಿಂದ 1 ಗಂಟೆಗೆ ವಿಸ್ತರಣೆಯಾದ ಬಳಿಕ ಬಿಯರ್ ಮಾರಾಟ ಹೆಚ್ಚಳವಾಗಿತ್ತು. ವರ್ಷಕ್ಕೆ ಸರಾಸರಿ ಶೇ.4ರಿಂದ ಶೇ.8ರಷ್ಟು ಹೆಚ್ಚಳ ಕಾಣುತ್ತಿದ್ದ ಬಿಯರ್ ಮಾರಾಟದ ಪ್ರಮಾಣ ಹಿಂದಿನ ಎರಡು ವರ್ಷಗಳಲ್ಲಿ ಶೇ.12ರಿಂದ ಶೇ.20ರಷ್ಟು ಏರಿಕೆ ಕಂಡಿತ್ತು.
ಬಿಯರ್ ದರ ಕಡಿಮೆಯಿದ್ದು, ಐಎಂಎಲ್‌ ಮದ್ಯ ಮಾರಾಟ ಹೆಚ್ಚಳವಾದರೆ ವರಮಾನ ಹೆಚ್ಚುತ್ತದೆ. ‘ಬೆಂಗಳೂರಿನ ಕೆಲವೆಡೆ ಬಿಯರ್‌ಗೆ ಹೆಚ್ಚು ಬೇಡಿಕೆ ಇದೆ. ಐಟಿ ಕಂಪನಿಗಳು, ಕಾಲೇಜುಗಳು ಇರುವ ಪ್ರದೇಶಗಳಲ್ಲಿ ಬಿಯರ್‌ ಖರೀದಿಸುವವರೇ ಹೆಚ್ಚಿದ್ದಾರೆ. ದಿನಕ್ಕೆ 20 ಬಾಕ್ಸ್ ಬಿಯರ್, 10 ಬಾಕ್ಸ್ ಐಎಂಎಲ್‌ಗೆ ಬೇಡಿಕೆ ಸಲ್ಲಿಸಿದರೆ 10 ಬಾಕ್ಸ್‌ ಬಿಯರ್‌ ಮಾತ್ರ ಪೂರೈಸಿ, 20 ಬಾಕ್ಸ್ ಐಎಂಎಲ್ ನೀಡಲಾಗುತ್ತಿದೆ’ ಎಂಬುದು ಮದ್ಯದ ಅಂಗಡಿ ಮಾಲೀಕರ ಅಳಲು.
‘ಆದ್ದರಿಂದಲೇ ಪ್ರಸಕ್ತ ಸಾಲಿನಲ್ಲಿ ಬಿಯರ್ ಮಾರಾಟ ಶೇ.30 ಕಡಿಮೆಯಾಗಿದೆ. ಇದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳೇ ಕಾರಣ’ ಎಂದು ಮದ್ಯದಂಗಡಿ ಮಾಲೀಕರೊಬ್ಬರು ದೂರುತ್ತಾರೆ.
ಐಎಂಎಲ್ ಮಾರಾಟಕ್ಕೆ ಮೇಲಧಿಕಾರಿಗಳಿಂದ ಒತ್ತಡ ಇರುವುದನ್ನು ಇನ್‌ಸ್ಪೆಕ್ಟರ್ ಹಂತದ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಚಿನ್ನ ಕದ್ದ ಕಳ್ಳರು

newsics.com ಹೈದರಾಬಾದ್: ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಹೈದರಾಬಾದ್‌ನ ಅಂಗಡಿಯೊಂದರಲ್ಲಿ 60 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ...

ಮಲಯಾಳಂ ಚಿತ್ರರಂಗದ ಖ್ಯಾತ ನಟ ಹರೀಶ್ ಪೆಂಗನ್ ನಿಧನ

newsics.com ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ಪೆಂಗನ್ ಅವರು ಮಂಗಳವಾರ (ಮೇ 30) ನಿಧನ ಹೊಂದಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ ಕೆಲ ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು....

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ದುಷ್ಕೃತ್ಯ ಸಂಚು: ದಕ್ಷಿಣ ಕನ್ನಡದ 16 ಕಡೆ NIA ದಾಳಿ

newsics.com ಮಂಗಳೂರು: ಪ್ರಧಾನಿ ಮೋದಿಯವರ ಬಿಹಾರ ಕಾರ್ಯಕ್ರಮದ ವೇಳೆ ದುಷ್ಕೃತ್ಯ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಕ್ಷಿಣ ಕನ್ನಡ ಜಿಲ್ಲೆಯ 16‌ ಕಡೆ ದಾಳಿ‌ ನಡೆಸಿದೆ. ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ,...
- Advertisement -
error: Content is protected !!