Thursday, March 30, 2023

ವರ್ಷದಲ್ಲಿ ಐದು ರಾಜ್ಯಗಳನ್ನು ‘ಕೈ’ಗೆ ಧಾರೆ ಎರೆದ ಬಿಜೆಪಿ…!

Follow Us

ಬೆಂಗಳೂರು: ಕೇಂದ್ರದಲ್ಲಿ ಎರಡನೇ ಬಾರಿಗೆ ಗದ್ದುಗೆಗೇರುತ್ತಿದ್ದಂತೆ ಮುಂದಿನ  ಐದು ವರ್ಷಗಳಲ್ಲಿ  ಕಾಂಗ್ರೆಸ್  ಮುಕ್ತ ಭಾರತ ಮಾಡುವುದಾಗಿ  ಘೋಷಿಸಿದ್ದ ಬಿಜೆಪಿ, ಕೇವಲ ಎರಡು ತಿಂಗಳಲ್ಲಿ ಎರಡು ರಾಜ್ಯಗಳಲ್ಲಿ ಅಡಳಿತವನ್ನು ಕಳೆದುಕೊಂಡಿದೆ.

ಇದರಿಂದ ಕಳೆದ ಒಂದು ವರ್ಷದಲ್ಲಿ ಐದು ರಾಜ್ಯಗಳು ಕೇಸರಿ ಪಡೆಯ ‘ಕೈ’ ತಪ್ಪಿದಂತಾಗಿದೆ. ಇಂದು ಪ್ರಕಟಗೊಂಡ ಜಾರ್ಖಂಡ್ ಚುನಾವಣಾ ಫಲಿತಾಂಶದಲ್ಲಿ ೮೧ ಸ್ಥಾನಗಳ ಪೈಕಿ  ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಹಾಗೂ  ಆರ್‌ಜೆಡಿ ಮೈತ್ರಿಕೂಟ ಸ್ಪಷ್ಟ  ಬಹುಮತ ಪಡೆದುಕೊಂಡಿದ್ದು, ಮೂರು ಪಕ್ಷಗಳ ಮೈತ್ರಿಕೂಟ  ಮ್ಯಾಜಿಕ್  ಸಂಖ್ಯೆಯ ಗಟಿ  ದಾಟಿದೆ.

ಕಳೆದೊಂದು ವರ್ಷದಲ್ಲಿ ಬಿಜೆಪಿ ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ ಘಡ,   ಹಾಗೂ  ಜಾರ್ಖಂಡ್‌ನಲ್ಲಿ ಅಧಿಕಾರ ಕಳೆದುಕೊಂಡಿದೆ.

ಕೇಂದ್ರದಲ್ಲಿ ಎರಡನೇ ಬಾರಿ  ಅಧಿಕಾರಕ್ಕೆ ಬಂದರೂ ಪ್ರಮುಖ ರಾಜ್ಯಗಳಲ್ಲಿ  ಅಧಿಕಾರ ಕಳೆದುಕೊಂಡಿರುವುದು  ಹಿರಿಯ ಬಿಜೆಪಿ ನಾಯಕರನ್ನು ತೀವ್ರವಾಗಿ  ಕಂಗೆಡಿಸಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆಗೂಡಿ ಬಹುಮತ ಸಾಧಿಸಿದರೂ, ಕೊನೆಯ ಕ್ಷಣದಲ್ಲಿ ಶಿವಸೇನೆ ಮೈತ್ರಿಯಿಂದ ನಿರ್ಗಮಿಸಿ ಬಿಜೆಪಿಗೆ ಅಧಿಕಾರ ಕೈತಪ್ಪುವಂತೆ ಮಾಡಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅತಿ ಕಡಿಮೆ ಸ್ಥಾನಗಳೊಂದಿಗೆ ಅಧಿಕಾರ ಕಳೆದುಕೊಂಡಿದೆ.  ಛತ್ತೀಸ್ ಘಡ ಚುನಾವಣೆಯಲ್ಲಿ  ರಮಣ್  ಸಿಂಗ್ ನೇತೃತ್ವದಲ್ಲಿ   ಬಿಜೆಪಿ  ಹೀನಾಯವಾಗಿ ಸೋತಿದೆ. ರಾಜಸ್ಥಾನದಲ್ಲಿ ವಸುಂಧರಾ ರಾಜೇ ನೇತೃತ್ವದ ಸರ್ಕಾರದ ವಿರೋಧಿ ಅಲೆ ಕಾಂಗ್ರೆಸ್ ಗೆ ವರದಾನವಾಗಿ ಪರಿಣಮಿಸಿದೆ.

ಒಂದೇ ವರ್ಷದಲ್ಲಿ ಐದು ಪ್ರಮುಖ ರಾಜ್ಯಗಳು ತನ್ನ ತೆಕ್ಕೆಯಿಂದ ಕೈಜಾರಿರುವುದು ಬಿಜೆಪಿಯನ್ನು ಕಂಗೆಡಿಸಿದೆ. ಸದ್ಯದಲ್ಲೇ ನಡೆಯಲಿರುವ ದೆಹಲಿ ವಿಧಾನಸಭೆ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳು ಬಿಜೆಪಿಗೆ ಸವಾಲಾಗಿ ಪರಿಣಮಿಸುವ ನಿರೀಕ್ಷೆಯಿದೆ. ಹೀಗಾಗಿ, ಚುನಾವಣಾ ಕಾರ್ಯಸೂಚಿ ಮತ್ತು ಕಾರ್ಯತಂತ್ರ ರೂಪಿಸುವಾಗ ಕೇವಲ ಪ್ರಧಾನಿ ಮೋದಿಯನ್ನಷ್ಟೇ ನೆಚ್ಚಿಕೊಳ್ಳದೆ ಹೆಚ್ಚು ಜಾಗೃತೆ ವಹಿಸುವ ಸಾಧ್ಯತೆಗಳಿವೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಮತ್ತಷ್ಟು ಸುದ್ದಿಗಳು

vertical

Latest News

ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

newsics.com ಬಿಹಾರ: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್. ಈ ಡಿಜಿಟಲ್ ಯುಗದಲ್ಲಿ ಯಾವುದೂ ಅಸಾಧ್ಯವಲ್ಲ ಎಂದೇ ಹೇಳಬಹುದು. ಬಿಹಾರದ 13 ವರ್ಷದ ಪ್ರತ್ಯೂಷ್ ಎಂಬ...

ಸಂಸದ ಸ್ಥಾನ ಕಸಿದುಕೊಂಡ ಕೋಲಾರಕ್ಕೆ ಮತ್ತೆ ರಾಹುಲ್‌ ಗಾಂಧಿ

newsics.com ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 2019ರ ಲೋಕಸಭೆ  ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ತಾವು ಮಾಡಿದ ಭಾಷಣಕ್ಕೆ ಮಾನನಷ್ಟ ಮೊಕದ್ದಮೆ ಗುರಿಯಾಗಿದ್ದು, ಸದ್ಯ ಸಂಸತ್‌ ಸದಸ್ಯತ್ವ ಸ್ಥಾನದಿಂದಲೇ ಅನರ್ಹಗೊಂಡಿದ್ದಾರೆ. ಈಗ ಕರ್ನಾಟಕ ವಿಧಾನಸಭಾ ಚುನಾವಣೆ...

ಈ ಬಾರಿ ಕಾಂಗ್ರೆಸ್​ಗೆ 115ಕ್ಕೂ ಹೆಚ್ಚು ಸ್ಥಾನ, BJPಗೆ 68 :ಎಬಿಪಿಸಿ ಓಟರ್ ಸಮೀಕ್ಷೆ

newsics.com ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ 115ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ. ಜೆಡಿಎಸ್ 23 ಸ್ಥಾನಗಳನ್ನು ಪಡೆಯಬಹುದು  ಎಂದು ಎಬಿಪಿ ಸಿಓಟರ್ ಸಮೀಕ್ಷೆ ಬುಧವಾರ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್...
- Advertisement -
error: Content is protected !!