Tuesday, March 28, 2023

ರಾಜ್ಯದಲ್ಲಿ ಸೆ.28ರಿಂದ 3 ಹಂತಗಳಲ್ಲಿ ಕೋರ್ಟ್ ಕಾರ್ಯಾರಂಭ

Follow Us

newsics.com
ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರಾಜ್ಯದ ನ್ಯಾಯಾಲಯಗಳು ಸೆ.28 ರಿಂದ ಹಂತ ಹಂತವಾಗಿ ಆರಂಭಗೊಳ್ಳಲಿವೆ.
ಸೆ.28 ರಿಂದ ತಾಲೂಕು, ಅಕ್ಟೋಬರ್ 5 ರಿಂದ 13 ಜಿಲ್ಲೆ, ಅಕ್ಟೋಬರ್ 12 ರಿಂದ 17 ಜಿಲ್ಲಾ ನ್ಯಾಯಾಲಯಗಳು ಕಾರ್ಯಾರಂಭ ಮಾಡಲಿವೆ.
ಈ ಸಂಬಂಧ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಾರ್ಗಸೂಚಿ ಹೊರಡಿಸಿದೆ. ಈ ಮಾರ್ಗಸೂಚಿಯ ಪ್ರಕಾರ, ರಾಜ್ಯದ 55 ತಾಲೂಕು ಕೋರ್ಟ್’ಗಳು ಸೆ.28 ರಿಂದ ಕಾರ್ಯಾರಂಭ ಮಾಡಲಿವೆ. ಅಕ್ಟೋಬರ್ 5 ರಿಂದ 13 ಜಿಲ್ಲೆಗಳ ನ್ಯಾಯಾಲಯಗಳು ಆರಂಭಗೊಳ್ಳಲಿದ್ದು, ಉಳಿದ ಜಿಲ್ಲಾ ನ್ಯಾಯಾಲಯಗಳು ಅಕ್ಟೋಬರ್ 12 ರಿಂದ ಕಾರ್ಯಾರಂಭ ಮಾಡಲಿವೆ.
ದಾವಣಗೆರೆ, ಹಾವೇರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಯಚೂರು, ಬೀದರ್, ರಾಮನಗರ, ಉಡುಪಿ, ಗದಗ, ಕೊಡಗು, ಕೊಪ್ಪಳ, ಯಾದಗಿರಿ, ಚಾಮರಾಜನಗರ ಜಿಲ್ಲಾ ನ್ಯಾಯಾಲಯಗಳು ಅಕ್ಟೋಬರ್ 5 ರಿಂದ ಆರಂಭಗೊಳ್ಳಲಿವೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ ಜಿಲ್ಲಾ ನ್ಯಾಯಾಲಯಗಳು ಅಕ್ಟೋಬರ್ 12 ರಿಂದ ಕಾರ್ಯಾರಂಭ ಮಾಡಲಿವೆ.
ಶೇ.50ರಷ್ಟು ವಕೀಲರಿಗೆ ಮಾತ್ರ ಅವಕಾಶ

ಕೋರ್ಟ್ ಬೆಳಗ್ಗೆ 10:30 ರಿಂದ ಸಂಜೆ 4 ರವರೆಗೆ ತೆರೆದಿರಲಿದ್ದು, ಈ ಅವಧಿಯಲ್ಲಿ ಶೇ.50 ರಷ್ಟು ಮಂದಿಗೆ ಮಾತ್ರ ವಕೀಲರ ಸಂಘದ ಕಚೇರಿಯಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಕೋರ್ಟ್ ಆವರಣದಲ್ಲಿನ ಕ್ಯಾಂಟೀನ್ ಸದ್ಯಕ್ಕೆ ತೆರೆಯುವಂತಿಲ್ಲ. ಅದೇ ರೀತಿ ಜೆರಾಕ್ಸ್ ಆಪರೇಟರ್ಸ್, ನೋಟರಿ ಪಬ್ಲಿಕ್, ಬೆರಳಚ್ಚುಗಾರರಿಗೆ ಅನುಮತಿ ನಿರಾಕರಿಸಲಾಗಿದೆ. ಕಕ್ಷಿದಾರರಿಗೂ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಸಾಕ್ಷಿದಾರರು, ಜಾಮೀನು ಪಡೆದಿರುವ ಆರೋಪಿಗಳು ಕೋವಿಡ್ 19 ನೆಗೆಟಿವ್ ವರದಿ ಹಾಜರುಪಡಿಸಿ ನಿಗದಿತ ಪ್ರಕರಣಗಳ ವಿಚಾರಣೆ ದಿನದಂದು ಕೋರ್ಟ್ ಆವರಣದೊಳಗೆ ಪ್ರವೇಶ ಪಡೆಯಬಹುದಾಗಿದೆ.
ಪ್ರತಿದಿನ ಕೋರ್ಟ್’ಗಳು ಬೆಳಗಿನ ಅವಧಿಯಲ್ಲಿ ಐವರು ಸಾಕ್ಷಿದಾರರನ್ನು ಮಾತ್ರ ಭೌತಿಕವಾಗಿ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಕೋರ್ಟ್ ಕಟೆಕಟೆಯನ್ನು ಮರುವಿನ್ಯಾಸಗೊಳಿಸಲು ಸೂಚಿಸಲಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರ ಶೇ.8.15 ಕ್ಕೆ ಏರಿಕೆ

newscics.com ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನುಬ ಹೆಚ್ಚಿಸಲು ತೀರ್ಮಾನಿಸಿದೆ....

ವಾಯುಮಾಲಿನ್ಯದಿಂದ 1,220 ಜನರು ಸಾವು

newscics.com ಮುಂಬೈ: ಮುಂಬೈನಲ್ಲಿ 2016-2021 ರ ನಡುವೆ 1,220 ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಅಂಕಿಅಂಶಗಳ ಪ್ರಕಾರ, ಮುಂಬೈನಲ್ಲಿ 2016 ಮತ್ತು 2021 ರ ನಡುವೆ 1,220...

ಭಾರತದ ಮೊದಲ ಗೀರ್ ತದ್ರೂಪಿ ತಳಿ ಆಕಳ ಕರು ಜನನ

newsics.com ನವದೆಹಲಿ: ಭಾರತದ ಮೊದಲ ತದ್ರೂಪಿ ಗಿರ್ ತಳಿಯ ಆಕಳ ಕರು ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (NDRI) ಯಲ್ಲಿ ಜನ್ಮ ಪಡೆದಿದೆ.ಈ...
- Advertisement -
error: Content is protected !!