Monday, October 2, 2023

ದೇಶದಲ್ಲಿ ಹೆಚ್ಚುತ್ತಿದೆ ವೃದ್ಧರ ಜನಸಂಖ್ಯೆ, ಹತ್ತು ವರ್ಷದಲ್ಲಿ ಎಲ್ಲೆಲ್ಲೂ ಅಜ್ಜಿಯರು!

Follow Us

newsics.com
ನವದೆಹಲಿ: ದೇಶದಲ್ಲಿ ಈಗ 13.8 ಕೋಟಿ ವೃದ್ಧರಿದ್ದು, 2031ರ ವೇಳೆಗೆ ವಯಸ್ಸಾದ ಮಹಿಳೆಯರೇ ಹೆಚ್ಚಿರುತ್ತಾರೆ.
ರಾಷ್ಟ್ರೀಯ ಅಂಕಿ ಅಂಶ ಕಚೇರಿಯ (NSO) ಅಧ್ಯಯನ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ದೇಶದಲ್ಲಿ 1961 ರಿಂದಲೂ ವೃದ್ಧರ ಜನಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ವೃದ್ಧರ ಸಾವಿನ ಪ್ರಮಾಣ ಕಡಿಮೆಯಾಗಿರುವುದೇ ಕಾರಣವೆಂದು ವರದಿ ಹೇಳಿದೆ.

ಈಗ ವೃದ್ಧೆಯರಿಗಿಂತ ವಯಸ್ಸಾದ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ 2031ರ ಹೊತ್ತಿಗೆ ವಯಸ್ಸಾದ ಮಹಿಳೆಯರೇ ವೃದ್ಧರಿಗಿಂತ ಹೆಚ್ಚಿರುತ್ತಾರೆ ಎಂದು ವರದಿ ಅಂದಾಜಿಸಿದೆ.

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರನ್ನು ಹಿರಿಯರು ಅಥವಾ ವೃದ್ಧರೆಂದು ವರದಿಯಲ್ಲಿ ಪರಿಗಣಿಸಲಾಗಿದೆ.

2001-2011ರ ಅವಧಿಯಲ್ಲಿ ವೃದ್ಧರ ಸಂಖ್ಯೆ 27 ಮಿಲಿಯನ್ (2.7 ಕೋಟಿ) ಗಿಂತ ಹೆಚ್ಚಿದೆ. 2011ರಲ್ಲಿ ಭಾರತದಲ್ಲಿ ವೃದ್ಧರ ಜನಸಂಖ್ಯೆ 103.8 ಮಿಲಿಯನ್ (10.38 ಕೋಟಿ) 52.8 ಮಿಲಿಯನ್ ಪುರುಷರು (5.28 ಕೋಟಿ) ಮತ್ತು 51.1 ಮಿಲಿಯನ್ (5.11 ಕೋಟಿ) ಮಹಿಳೆಯರಿದ್ದಾರೆ.

2031 ರ ವೇಳೆಗೆ 92.9 ಮಿಲಿಯನ್ ವೃದ್ಧ ಪುರುಷರು (9.29 ಕೋಟಿ) ಮತ್ತು 100.9 ಮಿಲಿಯನ್ (10.09 ಕೋಟಿ) ವೃದ್ಧ ಮಹಿಳೆಯರು ಸೇರಿದಂತೆ 1931 ಮಿಲಿಯನ್ (19.38 ಕೋಟಿ) ಗೆ ತಲುಪುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.
ದೇಶದಲ್ಲಿ ವಯೋವೃದ್ಧರ ಜನಸಂಖ್ಯೆ 1961ರಿಂದ ಹೆಚ್ಚಳವಾಗುತ್ತಿದೆ. 1981ರ ಜನಗಣತಿಯ ನಂತರ ದೇಶದಲ್ಲಿ ವಿವಿಧ ಆರೋಗ್ಯ ಯೋಜನೆಗಳಿಂದ ಮರಣ ಪ್ರಮಾಣ ಇಳಿಕೆಯಿಂದಾಗಿ ವಯಸ್ಸಾದವರ ಜನಸಂಖ್ಯೆಯ ಬೆಳವಣಿಗೆ ವೇಗ ಪಡೆದುಕೊಂಡಿದೆ ಎಂದು ಎನ್ಎಸ್ಒ ವರದಿ ತಿಳಿಸಿದೆ.

ದೇಶದಲ್ಲಿ 36,083 ಮಂದಿಗೆ ಕೊರೋನಾ, 37,927 ಜನ ಗುಣಮುಖ, 493 ಸಾವು

ಇನ್ನು ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶಾವಕಾಶ: ಪ್ರಧಾನಿ ಮೋದಿ ಘೋಷಣೆ

ದೀವಗಿ ಮಠದ ರಾಮಾನಂದ ಅವಧೂತ ಶ್ರೀ ವಿಧಿವಶ

ದೇಶಕ್ಕೆ ಕೊರೋನಾ ಸಾವು ಸದಾ ಕಾಡುವ ನೋವು: ಪ್ರಧಾನಿ ಮೋದಿ

ಮತ್ತಷ್ಟು ಸುದ್ದಿಗಳು

vertical

Latest News

ನಾಳೆಯಿಂದ ಕುಮಾರ ಪರ್ವತ ಚಾರಣಕ್ಕೆ ನಿರ್ಬಂಧ

newsics.com ಸುಬ್ರಹ್ಮಣ್ಯ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತಕ್ಕೆ ಚಾರಣ ಹೋಗಲು ನಾಳೆಯಿಂದ(ಅ. 3) ನಿರ್ಬಂಧ ವಿಧಿಸಲಾಗಿದೆ. ಪ್ರಸ್ತುತ ಜಿಲ್ಲೆಯಾದ್ಯಂತ...

ಚಿನ್ನ, ಬೆಳ್ಳಿ ದರ ಸ್ಥಿರ

Newsics.com ಬೆಂಗಳೂರು: ಕಳೆದ ವಾರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದ ಚಿನ್ನ ಬೆಳ್ಳಿಯ ದರ ಈ ವಾರ ಸ್ಥಿರಗೊಂಡಿದೆ. ದೇಶದಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 53,350 ರೂ., 24 ಕ್ಯಾರಟ್ 10 ಗ್ರಾಂ...

ವಿಮಾನದ ತುರ್ತು ಬಾಗಿಲು ತೆರೆಯಲೆತ್ನಿಸಿದ ಪ್ರಯಾಣಿಕ: ತುರ್ತು ಭೂ ಸ್ಪರ್ಶ, ಬಂಧನ

newsics.com ದೇವನಹಳ್ಳಿ: ಟೇಕ್ಆಫ್ ಆಗುತ್ತಿದ್ದ ವಿಮಾನದ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸ್ವಪ್ನೋಲ್ ಹೋಲೆ ಬಂಧಿತ ಪ್ರಯಾಣಿಕ. ಸ್ವಪ್ನೋಲ್ ಇಂಡಿಗೋ...
- Advertisement -
error: Content is protected !!