newsics.com
ನವದೆಹಲಿ: ಕೊರೋನಾ ಆತಂಕದ ನಡುವೆಯೇ 18 ದಿನ ನಡೆಯಲಿರುವ ಸಂಸತ್ನ ಮುಂಗಾರು ಅಧಿವೇಶನ ಸೋಮವಾರ (ಸೆ.14) ಆರಂಭವಾಗಲಿದ್ದು, ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ.
ಇದೇ ಮೊದಲ ಬಾರಿ ಲೋಕಸಭೆ ಹಾಗೂ ರಾಜ್ಯಸಭೆ ಅಧಿವೇಶನ ಯಾವುದೇ ಬಿಡುವಿಲ್ಲದೆ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರವರೆಗೆ ನಡೆಯಲಿದೆ. ಕೋವಿಡ್-19 ನೆಗೆಟಿವ್ ಪರೀಕ್ಷಾ ವರದಿಯಿರುವ ಸಂಸದರಿಗೆ ಹಾಗೂ ಸಿಬ್ಬಂದಿಗೆ ಮಾತ್ರವೇ ಸಂಸತ್ ಭವನ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಗಿದೆ.
ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಉಭಯ ಸದನಗಳಲ್ಲಿಯೂ ಸಂಸದರ ಆಸನ ವ್ಯವಸ್ಥೆಯಲ್ಲಿ ವಿಶೇಷ ಮಾರ್ಪಾಡು ಮಾಡಲಾಗಿದೆ. ಪ್ರಶ್ನೋತ್ತರ ಕಲಾಪವನ್ನು ರದ್ದುಪಡಿಸಲಾಗಿದೆ. ಸಂಸತ್ನ ಮುಂಗಾರು ಅಧಿವೇಶನಕ್ಕೆ ಮುನ್ನ ಸರ್ವಪಕ್ಷ ಸಭೆಯನ್ನು ಈ ಬಾರಿ ನಡೆಸಲಾಗಿಲ್ಲ.
ಭಾರತದಲ್ಲಿ ಕೊರೋನಾ ತಡೆಗೆ ಮೋದಿ ಪ್ರೇರಣೆ- ಕೇಂಬ್ರಿಜ್ ವಿವಿ ಅಭಿಪ್ರಾಯ
ಮೋದಿ ಸರ್ಕಾರ ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಹೊರಟಿರುವ 11 ಮಸೂದೆಗಳ ಪೈಕಿ ನಾಲ್ಕನ್ನು ಬಲವಾಗಿ ವಿರೋಧಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕೃಷಿಗೆ ಸಂಬಂಧಿಸಿದ ಅವಶ್ಯಕ ಸಾಮಗ್ರಿಗಳ ತಿದ್ದುಪಡಿ ಕಾಯ್ದೆ, ರೈತರ (ಸಶಕ್ತೀಕರಣ ಹಾಗೂ ರಕ್ಷಣೆ) ಉತ್ಪನ್ನಗಳ ಬೆಲೆ ಖಾತರಿ ಒಪ್ಪಂದ ಹಾಗೂ ಕೃಷಿ ಸೇವೆಗಳ ಅಧ್ಯಾದೇಶ, ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸಲಿದೆ.
ಈ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್ ಗಾಂಧಿ ಸೇರಿ ಹಲವು ಸಂಸದರು ಮುಂಗಾರು ಅಧಿವೇಶನಕ್ಕೆ ಗೈರು ಹಾಜರಾಗಲಿದ್ದಾರೆ.
ತಮಿಳುನಾಡಿಗೆ NEET ಬೇಡ- ಡಿಎಂಕೆ
ದೇಶದೆಲ್ಲೆಡೆ ಕಂಗನಾ ಹವಾ; ಝಾನ್ಸಿ ರಾಣಿ ಸಪೋರ್ಟ್’ಗೆ ಬಂತು ಸೀರೆ…!
ದೆಹಲಿ ಸಿಎಎ ಗಲಭೆ; ಉಮರ್ ಖಾಲಿದ್ ಬಂಧನ
ಸ್ವಪ್ನಾ ಸುರೇಶ್ ಗೆ ಎದೆನೋವು, ಆಸ್ಪತ್ರೆಗೆ ದಾಖಲು