Wednesday, November 29, 2023

ತೆಂಗಿನ ಕೊರತೆ ಮನವರಿಕೆ ಮಾಡಿಸಲು ಮರವೇರಿದ ಸಚಿವ

Follow Us

ಶ್ರೀಲಂಕಾ: ತೆಂಗು ಪ್ರಮುಖ ಕೃಷಿಉತ್ಪಾದನೆಯಾಗಿರುವ ಶ್ರೀಲಂಕಾದಲ್ಲಿ ತೆಂಗಿನ ಉತ್ಪಾದನೆ ಕುಂಠಿತವಾಗಿದ್ದು, ಈ ಬಗ್ಗೆ ಜನರಿಗೆ ಮಾಹಿತಿ ಹಾಗೂ ಅರಿವು ಮೂಡಿಸಲು ಸಚಿವರೇ ಖುದ್ದು ಮರವೇರಿದ ಘಟನೆ ವರದಿಯಾಗಿದೆ.

ಶ್ರೀಲಂಕಾ ಸಚಿವ ಸಂಪುಟದ ಸಚಿವ ಅರುಂಧಿಕಾ ಫರ್ನಾಂಡೋ ತೆಂಗಿನ ಮರ ಏರಿ ಜನತೆಗೆ ತೆಂಗು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ದೇಶದಲ್ಲಿ 700 ಮಿಲಿಯನ್‍ನಷ್ಟು ತೆಂಗಿನಕಾಯಿ ಪೊರೈಕೆಗೆ ಬೇಡಿಕೆ ಇದ್ದು, ಸ್ಥಳೀಯ ಉದ್ಯಮ ಹಾಗೂ ಆಹಾರದ ಬಳಕೆಯಿಂದ ತೆಂಗಿನ ಬೇಡಿಕೆ ಹೆಚ್ಚಿದೆ ಎಂಬ ವಿವರಣೆ ನೀಡಿದ್ದಾರೆ.

ದೇಶದ ಪ್ರಮುಖ ವಿದೇಶಿ ವಿನಿಮಯದ ಆಧಾರವಾಗಿರುವ ತೆಂಗಿನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿರುವ ಫರ್ನಾಂಡೋ, ದೇಶದಲ್ಲಿ ಲಭ್ಯವಿರುವ ಎಲ್ಲ ಖಾಲಿ ಜಾಗವನ್ನು ತೆಂಗಿನ ಬೆಳೆಗೆ ಬಳಸಿಕೊಳ್ಳುವಂತೆ ಹಾಗೂ ತೆಂಗಿನ ಉತ್ಪನ್ನಗಳ ಉದ್ಯಮವನ್ನು ಬೆಂಬಲಿಸುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೇ ದೇಶದಲ್ಲಿ ತೆಂಗಿನಕಾಯಿ ಬೆಲೆ ಬಗ್ಗೆ ಮಾತನಾಡಿದ ಅವರು, ಪೊರೈಕೆ ಕೊರತೆ ಇರೋದರಿಂದ ತೆಂಗಿನಕಾಯಿ ಬೆಲೆ ಇಳಿಸೋ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದಿದ್ದಾರೆ. ಇನ್ನು ತೆಂಗಿನ ಉತ್ಪಾದನೆ ಕುರಿತು ಜನರಲ್ಲಿ ಅರಿವು ಮೂಡಿಸೋಕೆ ಜೋಶ್‍ನಲ್ಲಿ ಮರ ಏರಿದ್ದ ಸಚಿವರನ್ನು ಮರದಿಂದ ಕೆಳಕ್ಕೆ ಇಳಿಸಲು ಸಚಿವರ ಬೆಂಬಲಿಗರು ಸಾಕಷ್ಟು ಶ್ರಮಿಸಿದರೂ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಮೈಸೂರು ವಿವಿ ಪ್ರೊಫೆಸರ್ ವಿರುದ್ಧ ಪಿಎಚ್ಡಿ ವಿದ್ಯಾರ್ಥಿನಿಯಿಂದ ಪೊಲೀಸರಿಗೆ ದೂರು: FIR ದಾಖಲು

newsics.com ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಶುಭ ಗೋಪಾಲ್ ವಿರುದ್ಧ ಪಿಎಚ್.ಡಿ. ವಿದ್ಯಾರ್ಥಿನಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರು ವಿವಿಯ ಮೈಕ್ರೋ ಬಯಾಲಜಿ ವಿಭಾಗದ ಪ್ರೊ.ಶುಭ ಗೋಪಾಲ್ ವಿರುದ್ಧ...

ಮುಂದಿನ ವರ್ಷದಿಂದ 500 ರಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭ: ಮಧು ಬಂಗಾರಪ್ಪ

newsics.com ಹಾಸನ: ಮುಂದಿನ ಶೈಕ್ಷಣಿಕ ವರ್ಷದಲ್ಲಿ 500 ರಿಂದ 600 ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲಾಗುವುದು. ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದ್ದು, ಶಾಲೆಗಳ ಅಭಿವೃದ್ಧಿಗೂ ಹಾಗೂ ಗ್ಯಾರಂಟಿಗೂ ಯಾವ ಸಂಬಂಧವಿಲ್ಲ ಎಂದು...

2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

newsics.com ಬೆಂಗಳೂರು: 2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿದಂತೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಹೀಗಿದೆ. ಜನವರಿ 15,...
- Advertisement -
error: Content is protected !!