Saturday, December 2, 2023

ಮಹಿಳಾ ರೋಗಿಗಳ ಹತ್ಯೆಗೈದು ಆ ಶವಗಳ ಮೇಲೆ ಗಿಡ ನೆಡುತ್ತಿದ್ದ ಡಾಕ್ಟರ್!

Follow Us

ಮುಂಬೈ: ಮಹಿಳಾ ರೋಗಿಗಳನ್ನು ಹತ್ಯೆಗೈದು, ಆ ಶವಗಳ ಮೇಲೆ ತೆಂಗಿನಗಿಡ ನೆಡುತ್ತಿದ್ದ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವೈದ್ಯ ಸತಾರಾದ ಸಂತೋಷ್ ಪಾಲ್ ಸುಮಾರು 22 ಮಹಿಳಾ ರೋಗಿಗಳನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದ್ದು, ಈವರೆಗೆ 6 ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ.
ಸಂತೋಷ್ ಎಂಬಿಬಿಎಸ್ ಮಾಡಿರುವುದಾಗಿ ಹೇಳಿದ್ದರೂ, ಆತನ ಬಳಿ ಎಲೆಕ್ಟ್ರೋ ಹೋಮಿಯೋಪಥಿ ಪದವಿಯಿತ್ತು. ಅನೇಕ ಆಸ್ಪತ್ರೆಗಳಿಗೆ ಹೋಗ್ತಿದ್ದ ಸಂತೋಷ್ ಚಿಕಿತ್ಸೆಗೆ ನೀಡುವ ಔಷಧಗಳ ಬಗ್ಗೆ ತಿಳಿದುಕೊಂಡಿದ್ದ. ಒಂಟಿಯಾಗಿರುವ ಹಾಗೂ ಬಡ ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ಕುಕೃತ್ಯ ಎಸಗುತ್ತಿದ್ದ.
ಸ್ವಯಂಘೋಷಿತ ವೈದ್ಯ ಸಂತೋಷ್ ಹಾಗೂ ನರ್ಸ್ ಸೇರಿ ಮಹಿಳಾ ರೋಗಿಗಳಿಗೆ ಇಂಜೆಕ್ಷನ್ ವೊಂದನ್ನು ನೀಡುತ್ತಿದ್ದರು. ಅದು ಸ್ನಾಯುಗಳನ್ನು ನಿಷ್ಕ್ರಿಯಗೊಳಿಸುತ್ತಿತ್ತು. ರೋಗಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದರು. ಬಳಿಕ ಹೆಣವನ್ನು ಮನೆ ಅಂಗಳದಲ್ಲಿ ಹೂತು ಅದರ ಮೇಲೆ ತೆಂಗಿನ ಅಥವಾ ಇನ್ಯಾವುದಾದರೂ ಗಿಡ ನೆಡುತ್ತಿದ್ದ.

ಮತ್ತಷ್ಟು ಸುದ್ದಿಗಳು

vertical

Latest News

ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?

ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಕೆಲವರು ಹಾರರ್ ಸಿನಿಮಾಗಳನ್ನು...

ಹೂವು ಬಿಡಿಸಲು ಹೋಗಿದ್ದಾಗ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

newsics.com ದಾವಣಗೆರೆ: ಪಂಪ್​ಸೆಟ್​​ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಬಸವರಾಜಪುರದಲ್ಲಿ ನಡೆದಿದೆ. ಅಲಿಬಾಯಿ(62) ಮೃತ ರ್ದುದೈವಿ. ಹೂವು ಬಿಡಿಸಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಸವಪಟ್ಟಣ...

ಜೈ ಶ್ರೀರಾಮ್‌ ಹೇಳುವಂತೆ ಗಡ್ಡಕ್ಕೆ ಬೆಂಕಿ ಹಚ್ಚಿ ವೃದ್ಧನ ಮೇಲೆ ಹಲ್ಲೆ

newsics.com ಕೊಪ್ಪಳ :  65 ವರ್ಷದ ಅಂಧ ಮುಸ್ಲಿಂ ವೃದ್ಧನಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಗಂಗಾವತಿ ಟೌನ್‌ನಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ. ಗಂಗಾವತಿಯಲ್ಲಿ ಒಂದು ಕಪ್‌ ಚಹಾ ಕುಡಿದು ಆಟೋರಿಕ್ಷಾಕ್ಕೆ ಕಾಯುತ್ತಿರುವಾಗ ಬೈಕ್‌ನಲ್ಲಿ ಇಬ್ಬರು...
- Advertisement -
error: Content is protected !!