newsics.com
ನವದೆಹಲಿ: ದೇಶದಲ್ಲಿ ʼವಿದ್ಯುತ್ ನಿಯಮಾವಳಿ-2020’ರ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ವಿದ್ಯುತ್ ಗೆ ಸಬ್ಸಿಡಿ ಹಣನೀಡಲೂ ಚಿಂತನೆ ನಡೆಸಿದೆ.
ಈ ನಿಯಮಾವಳಿ ಜಾರಿಯಾದರೆ ವಿದ್ಯುತ್ ಗ್ರಾಹಕರ ಹಕ್ಕು ಎಂದು ಪರಿಗಣನೆಯಾಗಲಿದ್ದು, ಎಲ್ಪಿಜಿ ರೀತಿಯಲ್ಲೇ ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ಸಬ್ಸಿಡಿ ಹಣ ಜಮೆ ಆಗಲಿದೆ.
ನಿಯಮಾವಳಿ ಪ್ರಕಾರ ವಿದ್ಯುತ್ ಪಡೆಯುವುದು ಈ ದೇಶದಲ್ಲಿರುವ ಪ್ರತಿಯೊಬ್ಬರ ಹಕ್ಕಾಗಲಿದೆ. ಈಗಾಗಲೇ ಕೇಂದ್ರ ಇಂಧನ ಇಲಾಖೆ ಈ ಸಂಬಂಧ ಕರಡು ನಿಯಮಾವಳಿ ರೂಪಿಸಿದ್ದು, ಅದಕ್ಕೆ ಈ ವರ್ಷದ ಸೆ.30ರೊಳಗೆ ಜನರಿಂದ ಆಕ್ಷೇಪಣೆ ಆಹ್ವಾನಿಸಿದೆ.
ಕೇವಲ 2 ದಾಖಲೆ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯಲು ಈ ನಿಯಮಾವಳಿ ನೆರವಾಗಲಿದೆ. ಮೆಟ್ರೋ ನಗರಗಳಲ್ಲಿ ಜನರು ಅರ್ಜಿ ಸಲ್ಲಿಸಿದ 7 ದಿನ, ಮುನ್ಸಿಪಲ್ ಪಟ್ಟಣಗಳಲ್ಲಿ 15 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 30 ದಿನದೊಳಗೆ ವಿದ್ಯುತ್ ಸಂಪರ್ಕ ನೀಡಬೇಕು ಅಥವಾ ಇರುವ ಸಂಪರ್ಕವನ್ನು ಬದಲಿಸಿಕೊಡಬೇಕು. ಇನ್ನು ಹೊಸ ಸಂಪರ್ಕ, ವರ್ಗಾವಣೆ, ರಿಪೇರಿ, ವಿದ್ಯುತ್ ಕಡಿತ ಇತ್ಯಾದಿ ಸಮಸ್ಯೆಗಳನ್ನು ಗ್ರಾಹಕರು ಬಗೆಹರಿಸಿಕೊಳ್ಳಲು ಆಪ್ ಆಧಾರಿತ ವ್ಯವಸ್ಥೆ ತರಬೇಕು ಎಂಬ ನೀತಿಗಳು ‘ವಿದ್ಯುತ್ ನಿಯಮಾವಳಿ-2020’ ರಲ್ಲಿ ಅಡಕವಾಗಿದೆ.
ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; 127 ಸೋಂಕಿತರ ಸ್ಥಳಾಂತರ
ನಾಳೆ ಭೈರಪ್ಪ, ಕಣವಿ, ತಿಮ್ಮಕ್ಕ ಸೇರಿ ಐವರಿಗೆ ಗೌರವ ಡಾಕ್ಟರೇಟ್ ಪ್ರದಾನ
12 ಕೋಟಿ ಲಾಟರಿ ಗೆದ್ದ ದೇಗುಲದ ಕ್ಲರ್ಕ್!
ಶ್ವೇತಭವನಕ್ಕೆ ವಿಷ ಪತ್ರ ಕಳುಹಿಸಿದ್ದ ಕೆನಡಾ ಮಹಿಳೆ ಸೆರೆ
2008ರ ಬೆಂಗಳೂರು ಸ್ಫೋಟ ಪ್ರಕರಣ: ಕೇರಳದಲ್ಲಿ ಆರೋಪಿ ಬಂಧನ