Thursday, December 7, 2023

ಭಾರತದ ಗಡಿಯಲ್ಲಿ ಮಿಲಿಟರಿ ಮೂಲಸೌಕರ್ಯ ಹೆಚ್ಚಿಸುತ್ತಿದೆ ಚೀನಾ

Follow Us

newsics.com
ನವದೆಹಲಿ: ಕಳೆದ 3 ವರ್ಷಗಳಲ್ಲಿ ಭಾರತದೊಂದಿಗಿನ ಗಡಿಯ ಮುಂಚೂಣಿ ಪ್ರದೇಶದಲ್ಲಿ ವಾಯುನೆಲೆಗಳು, ವಾಯು ರಕ್ಷಣಾ ತಾಣಗಳು ಮತ್ತು ಹೆಲಿಕಾಪ್ಟರ್ ನಿಲ್ದಾಣಗಳ ಸಂಖ್ಯೆಯನ್ನು ಚೀನಾ ದುಪ್ಪಟ್ಟುಗೊಳಿಸಿದೆ.
ಭೂತಾನ್ ಗೆ ಸೇರಿದ ಪ್ರದೇಶದಲ್ಲಿ 2017ರಲ್ಲಿ ಸೃಷ್ಟಿಯಾಗಿದ್ದ ಭಾರತದೊಂದಿಗಿನ ಡೋಕ್ಲಾಂ ಬಿಕ್ಕಟ್ಟು ಈ ಬದಲಾವಣೆಗೆ ಕಾರಣ ಎನ್ನಲಾಗಿದೆ. ಚೀನಾ ತನ್ನ ಮಿಲಿಟರಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವಿನ್ನೂ ಪೂರ್ಣಗೊಂಡಿಲ್ಲ. ಹಲವೆಡೆ ಇನ್ನೂ ಪ್ರಗತಿಯಲ್ಲಿದೆ. ಮೂರು ವಾಯುನೆಲೆಗಳು, ಐದು ವಾಯು ರಕ್ಷಣಾ ತಾಣಗಳು ಮತ್ತು ಐದು ಹೆಲಿಕಾಪ್ಟರ್ ನಿಲ್ದಾಣಗಳು ಸೇರಿದಂತೆ ಕನಿಷ್ಠ 13 ನೂತನ ಮಿಲಿಟರಿ ಮೂಲಸೌಕರ್ಯಗಳನ್ನು ಚೀನಾ ಭಾರತದೊಂದಿಗಿನ ಗಡಿಯಲ್ಲಿ ನಿರ್ಮಿಸುತ್ತಿದೆ. ಈ ಪೈಕಿ ನಾಲ್ಕು ಹೆಲಿಕಾಪ್ಟರ್ ನಿಲ್ದಾಣಗಳ ನಿರ್ಮಾಣ ಕಾರ್ಯ ಮೇ ತಿಂಗಳಿನಲ್ಲಿ ಲಡಾಖ್ ಬಿಕ್ಕಟ್ಟು ಉಂಟಾದ ಬಳಿಕ ಆರಂಭಗೊಂಡಿದೆ ಎಂದು ವರದಿ ತಿಳಿಸಿದೆ.

ಚೀನಾದಿಂದ ಆಮದು ಪ್ರಮಾಣ ಶೇ.27 ಕುಸಿತ

ಜಾಗತಿಕ ಭೂ ರಾಜಕೀಯ ಬೇಹುಗಾರಿಕೆ ವೇದಿಕೆ ಸ್ಟ್ರಾಟ್‌ಫರ್ ತನ್ನ ವರದಿಯಲ್ಲಿ ಚೀನಾದ ವಿಸ್ತರಣೆ ಬಗ್ಗೆ ಹೇಳಿದೆ. ಹಾಲಿ ಲಡಾಖ್ ಬಿಕ್ಕಟ್ಟಿಗೆ ಸ್ವಲ್ಪವೇ ಮೊದಲು ಗಡಿಯುದ್ದಕ್ಕೂ ಚೀನಾ ತನ್ನ ಮಿಲಿಟರಿ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಂಡಿರುವುದು ತನ್ನ ಗಡಿಪ್ರದೇಶಗಳಲ್ಲಿ ನಿಯಂತ್ರಣವನ್ನು ಪ್ರತಿಪಾದಿಸುವ ಅದರ ಪ್ರಯತ್ನಗಳ ಭಾಗವಾಗಿದೆ ಎಂದು ಸ್ಟ್ರಾಟ್‌ಫರ್‌ನ ಹಿರಿಯ ಜಾಗತಿಕ ವಿಶ್ಲೇಷಕ ಮತ್ತು ವರದಿಯ ಲೇಖಕ ಸಿಮ್ ಟಾಕ್ ಹೇಳಿದ್ದಾರೆ.
ಭಾರತದ ಭದ್ರತೆಯ ಮೇಲೆ ಪರಿಣಾಮವನ್ನುಂಟು ಮಾಡುವ ಮಿಲಿಟರಿ ಸ್ಥಾವರಗಳ ಉಪಗ್ರಹ ಚಿತ್ರಗಳ ವಿವರವಾದ ವಿಶ್ಲೇಷಣೆಯ ಮೂಲಕ ಚೀನಾದ ಮಿಲಿಟರಿ ಮೂಲಸೌಕರ್ಯ ನಿರ್ಮಾಣಗಳ ಸ್ಥೂಲಚಿತ್ರಣವನ್ನು ಸಿಮ್ ಟಾಕ್ ವಿವರಿಸಿದ್ದಾರೆ.

ಹೈಡ್ರೋಜನ್ ಚಾಲಿತ ವಿಮಾನ ನಿರ್ಮಾಣಕ್ಕೆ ಏರ್ ಬಸ್ ಸಿದ್ಧತೆ

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ...

ಊಟ ಕೇಳಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಿತ್ತು ಚಾಟಿ ಏಟು

newsics.com ಹಾವೇರಿ : ಊಟ ಕೇಳಿದ ವಿಧ್ಯಾರ್ಥಿಗಳಿಗೆ ವಾರ್ಡನ್ ಚಾಟಿ ಏಟು ಕೊಟ್ಟಿರುವಂತಹ ಅಮಾನವೀಯ ಘಟನೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಹಾವೇರಿಯಲ್ಲಿ ನಡೆದಿದೆ. ರಾಣೇಬೆನ್ನೂರು ನಗರದ ಅಂಬೇಡ್ಕರ್ ವಸತಿ...

ಹೊತ್ತಿ ಉರಿದ ಕಾರು – ಟಿಪ್ಪರ್ : ಇಬ್ಬರು ಸಜೀವ ದಹನ

Newsics.com ಬೆಳಗಾವಿ : ಕಾರು ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ, ಬಾಲಕಿ ಸೇರಿ ಇಬ್ಬರು ಸಜೀವ ದಹನವಾದರೆ ಮತ್ತಿಬ್ಬರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಬೆಳಗಾವಿ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ...
- Advertisement -
error: Content is protected !!