newsics.com
ಹರಾರೆ: ಜಿಂಬಾಬ್ವೆ ತಲುಪಿರುವ ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಒಂದು ಮಹತ್ವದ ಸಲಹೆ ನೀಡಿದೆ. ನೀರಿನ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಸೂಚಿಸಿದೆ.
ಸ್ನಾನ ಮಾಡುವಾಗ ಹೆಚ್ಚು ನೀರು ಬಳಸದಂತೆ ಮನವಿ ಮಾಡಿದೆ. ಹರಾರೆಯಲ್ಲಿ ನೀರಿನ ತೀವ್ರ ಕೊರತೆ ಇದ್ದು ಆಟಗಾರರು ಇದನ್ನು ಗಮನಿಸುವಂತೆ ಬಿಸಿಸಿಐ ಹೇಳಿದೆ.
ಕೆಲವು ಆಟಗಾರರು ಔಟ್ ಆದ ಕೂಡಲೆ ಶವರ್ ಕೆಳಗೆ ಬಹಳ ಹೊತ್ತು ನಿಂತು ಸ್ನಾನ ಮಾಡುತ್ತಿದ್ದಾರೆ. ಇದನ್ನು ಕೈ ಬಿಡುವಂತೆ ಬಿಸಿಸಿಐ ಹೇಳಿದೆ.
ಕೆ ಎಲ್ ರಾಹುಲ್ ನೇತೃತ್ವದ ಭಾರತ ಕ್ರಿಕೆಟ್ ತಂಡ 3 ಪಂದ್ಯಗಳ ಸರಣಿ ಆಡಲು ಜಿಂಬಾಬ್ವೆ ತಲುಪಿದೆ.