Wednesday, May 31, 2023

ಅಝರ್‌ಬೈಜಾನ್-ಆರ್ಮೇನಿಯ ನಡುವೆ ಯುದ್ಧ ಸ್ಥಿತಿ; ಹಲವು ಸೈನಿಕರ ಸಾವು

Follow Us

newsics.com
ಆರ್ಮೇನಿಯ: ಅಝರ್‌ಬೈಜಾನ್ ಮತ್ತು ಆರ್ಮೇನಿಯ ದೇಶಗಳ ನಡುವೆ ಯುದ್ಧ ಸನ್ನಿವೇಶ ಸೃಷ್ಟಿಯಾಗಿದ್ದು, ಉಭಯ ದೇಶಗಳ ಹಲವು ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಿವಾದಾಸ್ಪದ ನಗೊರ್ನೊ-ಕರಬಾಖ್ ವಲಯದಲ್ಲಿ ಭಾನುವಾರ ಸಂಘರ್ಷ ಸ್ಫೋಟಿಸಿದ್ದು, ಎರಡು ದೇಶಗಳ ನಡುವೆ ನಗೊರ್ನೊ-ಕರಬಾಖ್ ಒಡೆತನದ ವಿಚಾರದಲ್ಲಿ ಸುದೀರ್ಘಾವಧಿಯಿಂದ ಸಂಘರ್ಷವಿದೆ.
ಅಝರ್‌ಬೈಜಾನ್ ವಾಯು ಮತ್ತು ಫಿರಂಗಿ ದಾಳಿ ನಡೆಸಿದೆ ಎಂದು ಆರ್ಮೇನಿಯ ಆರೋಪಿಸಿದೆ. ಅಝರ್‌ಬೈಜಾನ್ ದೇಶದಲ್ಲಿ ಸೇನಾಡಳಿತ ಘೋಷಣೆಯಾಗಿದ್ದು, ಸೇನಾ ಜಮಾವಣೆಗೆ ಆದೇಶ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಸಂಘರ್ಷಕ್ಕೆ ಆರ್ಮೇನಿಯ ಕಾರಣ ಎಂದು ದೂರಿರುವ ಅಝರ್‌ಬೈಜಾನ್, ಗಡಿಯಲ್ಲಿ ನಡೆಯುತ್ತಿರುವ ಶೆಲ್ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತಿದೆ ಎಂದು ಹೇಳಿದೆ. 2016ರ ಏಪ್ರಿಲ್’ನಲ್ಲಿ ಭೀಕರ ಸಂಘರ್ಷ ನಡೆದಿದ್ದು, ಸುಮಾರು 110 ಮಂದಿ ಸಾವಿಗೀಡಾಗಿದ್ದರು. ಈ ವರ್ಷದ ಜುಲೈ ತಿಂಗಳಲ್ಲೂ ಸಂಘರ್ಷ ನಡೆದಿದ್ದು, ಕನಿಷ್ಠ 16 ಮಂದಿ ಮೃತಪಟ್ಟಿದ್ದರು.
ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳೆರಡೂ ಸೋವಿಯತ್ ಒಕ್ಕೂಟದ ಭಾಗಗಳಾಗಿದ್ದು, 1991ರಲ್ಲಿ ಸೋವಿಯತ್ ಒಕ್ಕೂಟ ಕುಸಿದ ಬಳಿಕ ಅವುಗಳು ಸ್ವತಂತ್ರ ದೇಶಗಳಾದವು. ನಗೊರ್ನೊ-ಕರಬಾಖ್‌ಗಾಗಿ ಎರಡೂ ದೇಶಗಳು ಸಂಘರ್ಷದಲ್ಲಿ ತೊಡಗಿವೆ.

ಮತ್ತಷ್ಟು ಸುದ್ದಿಗಳು

vertical

Latest News

ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಚಿನ್ನ ಕದ್ದ ಕಳ್ಳರು

newsics.com ಹೈದರಾಬಾದ್: ಆದಾಯ ತೆರಿಗೆ ಅಧಿಕಾರಿಗಳಂತೆ ವೇಷ ಧರಿಸಿ ಹೈದರಾಬಾದ್‌ನ ಅಂಗಡಿಯೊಂದರಲ್ಲಿ 60 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ...

ಮಲಯಾಳಂ ಚಿತ್ರರಂಗದ ಖ್ಯಾತ ನಟ ಹರೀಶ್ ಪೆಂಗನ್ ನಿಧನ

newsics.com ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ಪೆಂಗನ್ ಅವರು ಮಂಗಳವಾರ (ಮೇ 30) ನಿಧನ ಹೊಂದಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ ಕೆಲ ವರ್ಷಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದರು....

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ದುಷ್ಕೃತ್ಯ ಸಂಚು: ದಕ್ಷಿಣ ಕನ್ನಡದ 16 ಕಡೆ NIA ದಾಳಿ

newsics.com ಮಂಗಳೂರು: ಪ್ರಧಾನಿ ಮೋದಿಯವರ ಬಿಹಾರ ಕಾರ್ಯಕ್ರಮದ ವೇಳೆ ದುಷ್ಕೃತ್ಯ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಕ್ಷಿಣ ಕನ್ನಡ ಜಿಲ್ಲೆಯ 16‌ ಕಡೆ ದಾಳಿ‌ ನಡೆಸಿದೆ. ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ,...
- Advertisement -
error: Content is protected !!